Advertisement

Gudibande: ತಂಗಿಯ ಮಗನನ್ನೇ ಕೊಂದು ಹೂತು ಹಾಕಿದಳು!

11:41 PM Dec 01, 2023 | Team Udayavani |

ಗುಡಿಬಂಡೆ: ತಾಲೂಕಿನ ಮುತ್ತಕದಹಳ್ಳಿ ಗ್ರಾಮದ ಅಂಬಿಕಾ ಎಂಬಾಕೆ ತನ್ನ ತಂಗಿಯ ಮಗ ಮಧುಕುಮಾರ್‌ (6) ಎಂಬಾತನನ್ನು ಕೊಲೆ ಮಾಡಿ ಮಾವಿನ ತೋಟದಲ್ಲಿ ಹೂತು ಹಾಕಿದ್ದಲ್ಲದೆ, ಆತನ ಸಹೋದರಿ ಮನುಶ್ರೀಯನ್ನು ಅಪಹರಿಸಿರುವ ಘಟನೆ ಪೆರೇಸಂದ್ರ ಪೊಲೀಸ್‌ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಕೃತ್ಯಕ್ಕೆ ಸಹೋದರಿ ಮೇಲಿನ ಕೋಪವೇ ಕಾರಣ ಎಂದು ಶಂಕಿಸಲಾಗಿದೆ.

Advertisement

ಗುರುವಾರ ಅಂಬಿಕಾಳು ತನ್ನ ತಂಗಿ ಅನಿತಾಳ ಮಕ್ಕಳಾದ ಮಧು ಕುಮಾರ್‌ ಹಾಗೂ ಮನುಶ್ರೀಯನ್ನು ಮನೆಯಿಂದ ಕನಕದಾಸರ ಜಯಂತಿಗೆಂದು ಕರೆದು ಕೊಂಡು ಹೋಗಿದ್ದಳು. ಬಳಿಕ ಗ್ರಾಮದ ಮಾವಿನ ತೋಟದಲ್ಲಿ ಮಧು ಕುಮಾರ ನನ್ನು ಕೊಂದು ಹೂತು ಹಾಕಿದ್ದಾಳೆ. ಮನುಶ್ರೀ ಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾಳೆ. ಮನುಶ್ರೀಯನ್ನು ಬೆಂಗಳೂರಿನ ಆಟೋದಲ್ಲಿ ಕರೆದೊಯ್ಯುತ್ತಿದ್ದಾಗ ಚಾಲಕನಿಗೆ ಅನುಮಾನ ಬಂದಿದ್ದು, ಆತ ನೇರವಾಗಿ ಅವರನ್ನು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಕರೆದೊಯ್ದು.

ಅಲ್ಲಿ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿ, ಬಳಿಕ ಪೆರೇಸಂದ್ರ ಠಾಣೆಗೆ ಮಾಹಿತಿ ನೀಡಿದರು. ಅಲ್ಲಿ ಇನ್ನಷ್ಟು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಳು.
ತಂಗಿಯ ಮೇಲಿನ ಕೋಪಕ್ಕೆ ಕೊಲೆ ಮಾಡಿರುವುದಾಗಿ ತಿಳಿದು ಬಂದಿದ್ದು, ತನಿಖೆ ಮುಂದುವರಿದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next