Advertisement

ಗುಡಿಬಂಡೆ: ಪೊಲೀಸ್ ಪೇದೆ ಬೈಕ್ ಗೆ ಬೆಂಕಿ : ಆರೋಪಿಗಳ ಸೆರೆ

11:06 AM Oct 16, 2019 | Suhan S |

ಚಿಕ್ಕಬಳ್ಳಾಪುರ:  ಪೊಲೀಸ್ ಪೇದೆಯೊರ್ವರ ಬೈಕ್ ಗೆ ಬೆಂಕಿ ಇಟ್ಟು ತಾವೇ ನಂದಿಸಲು ಹೋದ ಕೀಡಿಗೇಡಿಗಳು ಸಿಕ್ಕಿಬಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಗ್ರಾಮದಲ್ಲಿ ನಡೆದಿದೆ.

Advertisement

ಗುಡಿಬಂಡೆ ಪಟ್ಟಣದ ಶ್ರೀ ಅರವಿಂದ ಅನುದಾನಿತ ಪ್ರೌಢಶಾಲೆಯ ಬಳಿ ಇರುವ ಹಳೇಗುಡಿಬಂಡೆ  ರೈತ ಚಂದ್ರಶೇಖರರೆಡ್ಡಿಗೆ ಸೇರಿದ ನರ್ಸರಿ ಮತ್ತು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪೇದೆ ನಾಗೇಶ್ ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟು ಸಿಕ್ಕಿ ಬಿದ್ದಿದ್ದಾರೆ.

ಕಳೆದ ಮಂಗಳವಾರ ಮದ್ಯರಾತ್ರಿ ಈ ಘಟನೆ ನಡೆದಿದ್ದು ಬೈಕ್ ಗೆ ಬೆಂಕಿ ಇಟ್ಟ ನಂತರ ಬೆಂಕಿಯನ್ನು ತಾವೇ ಆರಿಸಲು ಮುಂದಾಗಿ ಅಸಾಮಿಗಳು ಸಿಕ್ಕಿಬಿದ್ದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಪಡಿಸಿಕೊಂಡು ಗುಡಿಬಂಡೆ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳು ಉಮೇಶ್ ಮತ್ತು ವೆಂಕಟೇಶ್, ಗುಡಿಬಂಡೆ ಪಟ್ಟಣದ 1 ನೇ ವಾರ್ಡ್ ಇಂದಿರಾನಗರ ನಿವಾಸಿಗಳೆನ್ನಲಾಗಿದೆ. ಹಳೇ ದ್ವೇಷದ ಹಿನ್ನೆಲೆ ಕೃತ್ಯವನ್ನು ಎಸೆಗಿದ್ದಾರೆ ಎನ್ನಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next