Advertisement

Gudibande ಹಲ್ಲೆ ಪ್ರಕರಣ; 10 ಮಂದಿ ವಿರುದ್ಧ ಎಫ್ಐಆರ್‌ ದಾಖಲು

07:08 PM Dec 19, 2023 | Team Udayavani |

ಗುಡಿಬಂಡೆ: ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಸೋಮವಾರ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರ ವಿರುದ್ದ ಎಫ್.ಐ.ಆರ್ ದಾಖಲಾಗಿದ್ದು, 4 ಜನರನ್ನು ಬಂಧಿಸಲಾಗಿದೆ.

Advertisement

ದಪ್ಪರ್ತಿ ಗ್ರಾಮದ ಯುವಕ ಮನೋಜ್, ಯುವತಿ ಅಂಕಿತ ಇಬ್ಬರು ಪ್ರೀತಿಸಿ ಓಡಿ ಹೋಗಿ ಮದುವೆ ಮಾಡಿಕೊಂಡ ಕಾರಣ ಹುಡುಗಿಯ ಮನೆಯ ಕಡೆಯವರು ಯುವಕನ ತಂದೆ, ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಇವರಿಬ್ಬರು ಗುಡಿಬಂಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪೊಲೀಸರು ಹಲ್ಲೆ ನಡೆಸಿದ ಆರೋಪಿಗಳಿಗಾಗಿ ಬಲೆ ಬೀಸಿ ನಾಲ್ಕು ಜನರಾದ ಯುವತಿಯ ತಂದೆ ಶ್ರೀನಿವಾಸ ಸೇರಿದಂತೆ ವೆಂಕಟೇಶಪ್ಪ, ಆನಂದಪ್ಪ, ಗೋವಿಂದಪ್ಪ ರವರನ್ನು ಬಂಧಿಸಿದ್ದು, ಉಳಿದವರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಯುವಕನ ತಾಯಿ ವೆಂಕಟಲಕ್ಷ್ಮಮ್ಮ ರವರ ತಲೆಗೆ ತೀವ್ರತರವಾದ ಗಾಯವಾದ ಕಾರಣ ಚಿಕ್ಕಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದು, ತಂದೆ ಗಂಗರಾಜ ಗುಡಿಬಂಡೆ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next