Advertisement

ಭರವಸೆ: ಲಾರಿ ಮುಷ್ಕರ ವಾಪಸ್‌

06:05 AM Jun 22, 2018 | |

ಬೆಂಗಳೂರು: ಥರ್ಡ್‌ ಪಾರ್ಟಿ ಇನ್ಷೊರೆನ್ಸ್‌ ಪ್ರೀಮಿಯಂ ದರವನ್ನು ಯಥಾಸ್ಥಿತಿ ಮುಂದುವರಿಸುವ ಭರವಸೆ ನೀಡಿದ ಹಿನ್ನೆಲೆ ಯಲ್ಲಿ ಅಖೀಲ ಭಾರತ ಲಾರಿ ಮಾಲೀಕರ ಒಕ್ಕೂಟ ಕಳೆದ ನಾಲ್ಕು ದಿನಗಳಿಂದ ದೇಶವ್ಯಾಪಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ.

Advertisement

ಥರ್ಡ್‌ ಪಾರ್ಟಿ ಇನ್ಷೊರೆನ್ಸ್‌ನ ಪ್ರೀಮಿಯಂಮೊತ್ತವನ್ನು ಏಪ್ರಿಲ್‌ 1ರಿಂದ ಶೇ. 22ರಷ್ಟು ಹೆಚ್ಚಳ ಮಾಡಲಾಗಿತ್ತು. ಈ ಕ್ರಮವನ್ನು ವಿರೋಧಿಸಿ ಲಾರಿ ಮಾಲೀಕರು ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರು. ಗುರುವಾರ ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next