Advertisement

Priyank Kharge: ಮುಡಾ ಬಗ್ಗೆ ಜಿಟಿಡಿ ಹೇಳಿದ್ದು ಸರಿ ಇದೆ

11:57 PM Oct 03, 2024 | Team Udayavani |

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡರು ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರದ್ದು ಮಾತ್ರವೇ ಆಗಿಲ್ಲ. ಮುಡಾ ಯಡವಟ್ಟಿನಿಂದ ತಪ್ಪಾಗಿದೆ. ಸ್ವತಃ ಮುಡಾ ಕೂಡ ತಪ್ಪು ಒಪ್ಪಿಕೊಂಡಿದೆ. ಆದರೆ, ಇದರಲ್ಲಿ ಬೇರೆಯವರ ತಪ್ಪು ಹೇಳುತ್ತಿಲ್ಲ. ಸಾವಿರಾರು ಸೈಟ್‌ ಪರಿಹಾರ ವಿಚಾರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದು ರಾಜಕೀಯ ಪ್ರೇರಿತ ಎಂಬುದು ಜಿ.ಟಿ. ದೇವೇಗೌಡ ಅವರಿಗೂ ಗೊತ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್‌. ಅಶೋಕ್‌ ಅವರಿಗೆ ನೈತಿಕೆ ಇದೆಯೇ? ಇದನ್ನೇ ಜಿ.ಟಿ. ದೇವೇಗೌಡರೂ ಹೇಳಿದ್ದಾರೆ ಎಂದರು.

ವಿಪಕ್ಷ ನಾಯಕ ಆರ್‌. ಅಶೋಕ್‌ಗೆ ಬಿಡಿಎ ಜಮೀನು ಅಂತ ಗೊತ್ತಿದ್ದರೂ ಅದರ ಫ‌ಲ ಪಡೆದಿದ್ದಾರೆ. ಅನಂತರ ತಮ್ಮ ತಲೆ ಮೇಲೆ ಬರುತ್ತದೆ ಎಂಬುದನ್ನು ಅರಿತು ವಾಪಸ್‌ ನೀಡಿದ್ದಾರೆ. ನಿಜವಾಗಿಯೂ ನೈತಿಕತೆ ಇದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅದೇ ರೀತಿ, ಬಿ.ವೈ. ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next