Advertisement

ವಡಾಲ ಶ್ರೀ ರಾಮ ಮಂದಿರ ಶ್ರೀ ಜಿಎಸ್‌ಬಿ ಗಣೇಶೋತ್ಸವ 

04:16 PM Sep 28, 2018 | |

ಮುಂಬಯಿ: ವಡಾಲ ಶ್ರೀ ರಾಮ ಮಂದಿರದ ದ್ವಾರಕನಾಥ ಭವನದ 64ನೇ ವಾರ್ಷಿಕ ಶ್ರೀ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸ ವವು ಸೆ. 13ರಿಂದ   ಸೆ. 23 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಸೇವಾ ಕಾರ್ಯಕ್ರಮಗಳೊಂದಿಗೆ  ನಡೆಯಿತು.

Advertisement

ಸೆ. 20ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಚ್‌ಡಿಎಫ್‌ಸಿ ಬ್ಯಾಂಕಿನ ಡೆಪ್ಯುಟಿ ಆಡಳಿತ ನಿರ್ದೇಶಕ ಪರೇಶ್‌ ಸುಖ್ತಂಕರ್‌ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.  

ಗೌರವ ಅತಿಥಿಯಾಗಿ ಉದ್ಯಮಿ ಶಶಿಕಾಂತ್‌ ಶ್ಯಾನ್‌ಭಾಗ್‌ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿ ಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾ ಯಿತು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಮಕ್ಕಳನ್ನು ಅಭಿನಂದಿಸಲಾಯಿತು.
ಸಂಸ್ಥೆಯ ಟ್ರಸ್ಟಿ, ಕಾರ್ಯಾಧ್ಯಕ್ಷ ರಾಜನ್‌ ಸಿ. ಭಟ್‌, ಟ್ರಸ್ಟಿ ಕಾರ್ಯದರ್ಶಿ ಮುಕುಂದ್‌ ವೈ. ಕಾಮತ್‌, ಟ್ರಸ್ಟಿ ಕೋಶಾಧಿಕಾರಿ ರಾಜೀವ್‌ ಡಿ. ಶೇಣಿÌ, ಗಿರೀಶ್‌ ಎಸ್‌. ಪಿಕಾಲೆ, ಉಮೇಶ್‌ ಎ. ಪೈ, ಶಾಂತಾರಾಮ್‌ ಎ. ಭಟ್‌, ಪ್ರಮೋದ್‌ ಎಚ್‌. ಪೈ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಲ್ಲಾಸ್‌ ಕಾಮತ್‌, ಎನ್‌. ಎನ್‌. ಪಾಲ್‌, ಕಮಲಾಕ್ಷ ಸರಾಫ್‌, ಸಂಜಯ್‌ ಕಾಮತ್‌, ಅನಿಲ್‌ ಆಚಾರ್ಯ, ಅನಂದ ಪೈ, ಮನೋಹರ ವಾಗ್ಲೆ, ನಾಗರಾಜ್‌ ಕಿಣಿ, ಸಂತೋಷ್‌ ಭಟ್‌, ನಾಗೇಶ್‌ ಕಾಮತ್‌ ಕುಮಟಾ, ವಸುಧಾ ಭಟ್‌ ಮೊದಲಾದವರು ಸಹಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಷಾಸುರ ಮರ್ದಿನಿ ಯಕ್ಷಗಾನ ಪ್ರದರ್ಶನಗೊಂಡಿತು. ವಡಾಲ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಗೋವಿಂದಾಚಾರ್ಯ ಹಾಗೂ ತಂಡದವರಿಂದ ಉತ್ಸವದುದ್ದಕ್ಕೂ ಮಹಾ ಅನ್ನದಾನ ಸೇವೆ, ಮೂಡ ಗಣಪತಿ ಪೂಜೆ, ಗಣಹೋಮ, ಸರ್ವಲಂಕಾರ ಸೇವೆ, ಸಾಮೂಹಿಕ ಮೂಡಗಣಪತಿ ಪೂಜೆ, ಮಹಾಪೂಜೆ, ಮೋಧಕ ನೈವೇದ್ಯ, ಗಣಹೋಮ, ರಂಗಪೂಜೆ, ಪುಷ್ಪ ಪೂಜೆ, ರಾತ್ರಿಪೂಜೆ, ದೀಪಾರಾಧನೆ, ಪಂಚಖಾದ್ಯ ನೈವೇದ್ಯ, ತುಲಾಭಾರ ಸೇವೆ, ಧೂರ್ವರ್ಪಣೆ ಸೇವೆ, ಕರ್ಪೂರ ಆರತಿ, ಪ್ರಸಾದ ಸೇವೆ ಇನ್ನಿತರ ಸೇವೆಗಳು ನಡೆಯಿತು.

ದಿನಂಪ್ರತಿ ನಗರ, ಉಪನಗರಗಳಿಂದ ಸಾವಿರಾರು ಭಕ್ತಾದಿಗಳು ಜಾತಿ, ಮತ, ಧರ್ಮವನ್ನು ಮರೆತು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಉತ್ಸವದುದ್ದಕ್ಕೂ ದಿನಂಪ್ರತಿ ಸಂಜೆ ಭಜನೆ, ಸಂಗೀತ, ನಾಟಕ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮಗಳನ್ನು  ಆಯೋಜಿಸಲಾಗಿತ್ತು. ಮಹಿಳಾ ವಿಭಾಗದ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ  ಸದಸ್ಯರು, ಅರ್ಚಕ ವೃಂದದವರ ಸಹಕಾರದೊಂದಿಗೆ ಗಣೇಶೋತ್ಸವವು ಸಮಾಪ್ತಿ ಗೊಂಡಿತು. 

Advertisement

ಚಿತ್ರ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next