Advertisement

ಜಿಎಸ್‌ಬಿ ಬಾಲಾಜಿ ಮಂದಿರ:  ಚೂಡಿಪೂಜೆ 

04:47 PM Aug 28, 2018 | |

ಮುಂಬಯಿ: ವಸಾಯಿ ರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದವರ ಬಾಲಾಜಿ ಸೇವಾ ಸಮಿತಿಯ ಜಯ ಅಮ್ಮ ಅನ್ನಪೂರ್ಣ ಸಭಾಗೃಹದಲ್ಲಿ ಮಹಿಳಾ ವಿಭಾಗದವರಿಂದ ಶ್ರಾವಣ ಮಾಸದ ಅಂಗವಾಗಿ ಸಾಮೂಹಿಕ ಚೂಡಿ ಪೂಜೆಯು ಆ. 19ರಂದು ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ನಡೆಯಿತು.

Advertisement

ಮಹಿಳಾ ವಿಭಾಗದ ಕಾರ್ಯದರ್ಶಿ ಸ್ಮಿತಾ ಗಣೇಶ್‌ ಪೈ ಅವರ ಮಾರ್ಗದರ್ಶನದಲ್ಲಿ ವಿಜಯಾ ತಾರಾನಾಥ ಪೈ, ಮನಿಷಾ ಕಮಲಾಕ್ಷ ಭಟ್‌ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರ ವೇರಿದವು. ಡಾ| ಅನಿಕಾ ಅರವಿಂದ ಪೈ, ಭವ್ಯ ಭದ್ರಕುಮಾರ್‌ ಕಾಮತ್‌ ಮತ್ತು ಸುಜಾತಾ ಸಂತೋಷ್‌ ಪೈ ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಆನಂತರ ತುಳಸಿ ಮಾತೆಗೆ ಮಹಾಮಂಗಳಾತಿ ನಡೆಯಿತು.

ಕಿರಿಯರು ಹಿರಿಯರಿಗೆ ಪೂಜಿಸಿದ ಚೂಡಿಯನ್ನಿತ್ತು ಆಶೀರ್ವಾದ ಪಡೆದರು. ಮಹಿಳಾ ವಿಭಾಗದವರಿಂದ ಭಜನ ಕಾರ್ಯಕ್ರಮ ನೆರವೇರಿತು. ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ್‌ ಪೈ, ತಬಲಾದಲ್ಲಿ ಗಣೇಶ್‌ ಪೈ ಸಹಕರಿಸಿದರು. ಶ್ರೀ ವೆಂಕಟರಮಣ ಮತ್ತು ಇತರ ಪರಿವಾರ ದೇವರಿಗೆ ದೇವದಾಸ್‌ ಭಟ್‌ ಅವರಿಂದ ಮಹಾಮಂಗಳಾರತಿ ನಡೆಯಿತು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯು ಮಹಿಳಾ ವಿಭಾಗದ ವತಿಯಿಂದ ಜರಗಿತು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಪೈ, ಕಾರ್ಯದರ್ಶಿ ಸ್ಮಿತಾ ಪೈ, ಕೋಶಾಧಿಕಾರಿ ಅಶ್ವಿ‌ನಿ ಭಕ್ತ, ಇತರ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯೆಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮಹಿಳೆಯರು  ಉಪಸ್ಥಿತರಿದ್ದು   ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next