Advertisement

ರಾಜ್ಯದಲ್ಲಿ ಹೆಚ್ಚುತ್ತಿದೆ ಕೋವಿಡ್‌ 19 ಆತಂಕ

07:42 AM May 24, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಕಳೆದ ಹನ್ನೆರಡು ದಿನಗಳ ಅವಧಿಯಲ್ಲಿ ಸಾವಿರ ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಲಾಕ್‌ಡೌನ್‌ ಸಡಿಲಿಕೆ ಬೆನ್ನಲ್ಲೇ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಹಸಿರು ವಲಯ ಎಂದು ಗುರುತಿಸಿದ್ದ ಜಿಲ್ಲೆಗಳಲ್ಲಿಯೂ ಪ್ರಕರಣ  ಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಂಡಿದೆ. ಹೊರ ರಾಜ್ಯಗಳಲ್ಲಿದ್ದ ಕನ್ನಡಿಗರನ್ನು ವಾಪಸ್‌ ಕರೆಸಿಕೊಂಡ ನಂತರ ಉಡುಪಿ, ಮಂಡ್ಯ, ಚಿಕ್ಕಬಳ್ಳಾಪುರ, ಯಾದಗಿರಿ, ಉತ್ತರಕನ್ನಡ, ರಾಯ ಚೂರು ಮೊದಲಾದ ಜಿಲ್ಲೆಗಳಲ್ಲಿ ಏಕಾಏಕಿ  ಸೋಂಕಿನ ತೀವ್ರತೆ ಹೆಚ್ಚಾಗಿದೆ.

Advertisement

ಮೇ 11ರ ಮೊದಲು ಕೆಲವೊಂದು ಜಿಲ್ಲೆಗಳಲ್ಲಿ 10ರಿಂದ 15ಕ್ಕೆ ಸೀಮಿತವಾಗಿದ್ದ ದೃಢಪ್ರಕರಣಗಳು ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆಯಿಂದ ಅದು 30ರಿಂದ 40ಕ್ಕೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿಯೂ ದೃಢ ಪ್ರಕರಣ ದಿನೇದಿನೆ ಏರಿಕೆಯಾಗುತ್ತಿದೆ. ಮೇ 12ರಂದು 902 ಸಕ್ರಿಯ ಪ್ರಕರಣವಿದ್ದು, ಮೇ 23ರ ಅವಧಿಗೆ ಅದು 1,959ಕ್ಕೆ ಏರಿಕೆಯಾಗಿದೆ. ಮೇ12 ರಂದು 14, ಮೇ 13ರಂದು 63,  ಮೇ 14ರಂದು 39, ಮೇ 15ರಂದು 22, ಮೇ 16ರಂದು 71, ಮೇ17ರಂದು 36, ಮೇ 18ರಂದು 70, ಮೇ 19 ರಂದು 94, ಮೇ 20ರಂದು 149, ಮೇ 21ರಂದು 67, ಮೇ 22ರಂದು 147 ಹಾಗೂ ಮೇ 23ರಂದು  216 ಪ್ರಕರಣ ರಾಜ್ಯದಲ್ಲಿ ವರದಿಯಾಗಿದೆ.

ಹೊರರಾಜ್ಯದಿಂದ ಬಂದಿರುವವರಿಂದ ಸೋಂಕು ಹೆಚ್ಚುತ್ತಿದ್ದರೂ, ಆತಂಕ ಮಾತ್ರ ಎಲ್ಲರಲ್ಲೂ ಮನೆ ಮಾಡಿದೆ. ನಮ್ಮೂರಿಗೂ ಕೋವಿಡ್‌ 19 ಬರಹುದು ಎಂಬ ಭಯದಲ್ಲಿ ಜನ ದಿನಕಳೆಯುತ್ತಿದ್ದಾರೆ. ಆರೋಗ್ಯ ಇಲಾಖೆ  ಶುಕ್ರವಾರ ಸಂಜೆ ಬಿಡುಗಡೆ ಮಾಡಿದ್ದ ವರದಿಯಲ್ಲಿ ಚಿಕ್ಕಬಳ್ಳಾಪುರ  ದಲ್ಲಿ 47 ಪ್ರಕರಣ ದೃಢಪಟ್ಟಿತ್ತು. ಶನಿವಾರ ಅದಕ್ಕೆ 26 ಹೆಚ್ಚುವರಿಯಾಗಿ ಸೇರಿಕೊಂಡಿತ್ತು. ಶುಕ್ರವಾರ ರಾಯಚೂರಿನಲ್ಲಿ 10 ದಾಖಲಾಗಿತ್ತು,

ಶನಿವಾರ ಅದಕ್ಕೆ 40 ಸೇರಿಕೊಂಡಿದೆ.  ಮಂಡ್ಯದಲ್ಲಿ ಶುಕ್ರವಾರ 8 ಮಂದಿಗೆ ದೃಢಪಟ್ಟಿದ್ದರೆ ಶನಿವಾರ 28 ಮಂದಿಗೆ ದೃಢಪಟ್ಟಿದೆ. ಶುಕ್ರವಾರ ಯಾದಗಿರಿಯಲ್ಲಿ 2 ಪ್ರಕರಣ ದಾಖಲಾಗಿತ್ತು, ಶನಿವಾರ ಏಕಾಏಕಿ 72 ಪ್ರಕರಣ ದಾಖಲಾಗಿದೆ. ಗದಗದಲ್ಲಿ  ಶುಕ್ರವಾರ ಒಂದು ಪ್ರಕರಣ ಇರಲಿಲ್ಲ, ಶನಿವಾರ 15 ಪ್ರಕರಣ ದೃಢಪಟ್ಟಿದೆ. ಹೀಗೆ ಹಲವು ಜಿಲ್ಲೆಗಳಲ್ಲಿ ಕೋವಿಡ್‌ 19 ಸೋಂಕಿತರ ಪ್ರಕರಣ ಏರಿಕೆಯಾಗುತ್ತಿರುವುದು ಜನರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ.

ಕ್ವಾರಂಟೈನ್‌ನಲ್ಲಿರುವವರ ಭೇಟಿ: ಮಹಾರಾಷ್ಟ್ರ,  ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮೊದ ಲಾದ ರಾಜ್ಯಗಳಲ್ಲಿದ್ದ ಕನ್ನಡಿಗರು ಸಾವಿರಾರು ಸಂಖ್ಯೆಯಲ್ಲಿ ತಾಯ್ನಾಡಿಗೆ ಬಂದಿದ್ದಾರೆ. ಬಹುತೇಕರು ಸರ್ಕಾರದ ಕ್ವಾರಂಟೈನ್‌  ವ್ಯವಸ್ಥೆಯಲ್ಲಿದ್ದಾರೆ. ಆದರೆ, ಕ್ವಾರಂಟೈನ್‌ನಲ್ಲಿ ಇರುವವರಿಗೆ ಮನೆಯಿಂದಲೇ ಊಟ, ತಿಂಡಿ ತಯಾರಿಸಿಕೊಂಡು ಹೋಗಿ ಕೊಡುತ್ತಿರುವುದು ಕೆಲವೊಂದು ಜಿಲ್ಲೆಗಳಲ್ಲಿ ಸಾಮಾನ್ಯವಾಗಿದೆ.

Advertisement

ಒಂದೇ ದಿನ 72 ಜನರಲ್ಲಿ ಸೋಂಕು; ಯಾದಗಿರಿ ತಲ್ಲಣ
ಯಾದಗಿರಿ: ರಾಜ್ಯದ ಗಡಿ ಜಿಲ್ಲೆ ಯಾದಗಿರಿಯಲ್ಲಿ ಶನಿವಾರ ಒಂದೇ ದಿನ 72 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆ ತಲ್ಲಣಗೊಂಡಿದೆ. ಈವರೆಗೆ 15 ಇದ್ದ ಸೋಂಕಿತರ ಸಂಖ್ಯೆ ದಿಢೀರನೇ ಸ್ಫೋಟಗೊಂಡಿದ್ದು, ಇದೀಗ 87ಕ್ಕೆ  ಏರಿಕೆಯಾಗಿದೆ. ಒಂದು ವರ್ಷದ ಬಾಲಕಿ ಸೋಂಕಿತ ಪಿ-1756 ಸೇರಿ 17 ಮಂದಿ ಅಪ್ರಾಪ್ತ ಮಕ್ಕಳಲ್ಲಿ ಸೋಂಕು ತಗುಲಿದ್ದು, ಎಲ್ಲ 72 ಸೋಂಕಿತರಲ್ಲಿ ಬಹುತೇಕರು 50 ವರ್ಷದೊಳಗಿನವರಾಗಿ ದ್ದಾರೆ.

ಎಲ್ಲರೂ ಕ್ವಾರಂಟೈನ್‌ ಕೇಂದ್ರದಲ್ಲಿ ಇದ್ದವರೇ ಆಗಿದ್ದಾರೆ. ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌  ನಲ್ಲಿರುವ ಜನರಲ್ಲೇ ಹೆಚ್ಚಾಗಿ ಸೋಂಕು ಪತ್ತೆಯಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಪುಣೆಯಿಂದ ಆಗಮಿ ಸಿದ್ದ ನಗರದ ದುಕಾನವಾಡಿಯ ಇಬ್ಬರು ಕ್ವಾರಂಟೈನ್‌ಗೆ  ಒಳಗಾ ಗದೆ ಮನೆಯಲ್ಲೇ ವಾಸವಾಗಿದ್ದರು. ಬಳಿಕ ಪೊಲೀಸರು ಈ ಇಬ್ಬರನ್ನು ಕರೆದೊಯ್ದು ಸಾಂಸ್ಥಿಕ ಕ್ವಾರಂಟೈನ್‌ ಮಾಡಿಸಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರ ಕಂಟಕ: ಸರ್ಕಾರ ಲಾಕ್‌ಡೌನ್‌ ನಿಯಮ ಸಡಿಲ  ಗೊಳಿಸಿ ಹೊರ  ರಾಜ್ಯದಿಂದ ಬರಲು ಅವಕಾಶ ಮಾಡಿಕೊಟ್ಟಿದ್ದೇ ಸೋಂಕು ಇಲ್ಲದ ಜಿಲ್ಲೆಗೆ ಕಂಟಕವಾಗಿ ಪರಿಣಮಿಸಿದೆ. ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿ  ಮರಳಿದ 12 ಸಾವಿರಕ್ಕೂ ಹೆಚ್ಚು ಜನರನ್ನು ಜಿಲ್ಲಾ ಡಳಿತ ಕ್ವಾರಂಟೈನ್‌ನಲ್ಲಿರಿಸಿದ್ದು, ಇವರಲ್ಲಿ ಈವರೆಗೆ ಮೂರು ಸಾವಿರದಷ್ಟು ಜನರ ಮಾದರಿ ಸಂಗ್ರಹಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next