Advertisement

Chintamani: ಹಾಡಹಗಲೇ ಯುವಕನ ಬರ್ಬರ ಹತ್ಯೆ

03:57 PM Dec 29, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಯುವಕನನ್ನು ಗುಂಪೊಂದು ಬರ್ಬರವಾಗಿ ಚಾಕುವಿನಿಂದ ತಿವಿದು ಕೊಲೆ ಮಾಡಿರುವ ಘಟನೆ ನಡೆದಿದೆ.

Advertisement

ಕೊಲೆಗೀಡಾದ ವ್ಯಕ್ತಿಯನ್ನು ಹೇಮಂತ್ (24 ವರ್ಷ) ಎಂದು ಗುರುತಿಸಲಾಗಿದೆ. ಈತ ಮೂಲತಃ ಚಿಂತಾಮಣಿ ತಾಲೂಕಿನ ಬರುಡುಗುಂಟೆ ಗ್ರಾಮದ ನಿವಾಸಿಯಾಗಿದ್ದು ಚಿಂತಾಮಣಿ ನಗರದ ಅಶ್ರಯ ಬಡಾವಣೆಯಲ್ಲಿ ವಾಸವಿದ್ದರು.

ಬಾರ್ ನೊಳಗೆ ಸ್ನೇಹಿತರ ಜೊತೆ ಕುಡಿದಿದ್ದು ಹೊರಗೆ ಬಂದಾಗ ಜಗಳ ನಡೆದಿದೆ. ಆಗ ಹೇಮಂತ್ ತಪ್ಪಿಸಿಕೊಂಡು ಪಕ್ಕದ ಪೆಟ್ರೋಲ್ ಬಂಕ್ ಒಳಗೆ ಹೋಗಿ ಅವಿತುಕೊಂಡಿದ್ದು, ಅಲ್ಲಿಗೆ ತೆರಳಿ ಆತನನ್ನು ಗೊಂಪೊಂದು ಕೊಲೆ ಮಾಡಿದೆ.

ವಿಷಯ ತಳಿದ ಕೂಡಲೇ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಇದೆ.

Advertisement

Udayavani is now on Telegram. Click here to join our channel and stay updated with the latest news.

Next