Advertisement

ಸುಟ್ಟ ವಿದ್ಯುತ್‌ಪರಿವರ್ತಕ: ಜನರ ಪರದಾಟ

12:21 PM May 21, 2018 | |

ಸಂಡೂರು: ವಿದ್ಯುತ್‌ ಪರಿವರ್ತಕ ಆಕಸ್ಮಿಕವಾಗಿ ಸುಟ್ಟು ವಿದ್ಯುತ್‌ ವ್ಯತ್ಯಯವಾಗಿ ಜನರು ಪರದಾಡಿದ ಘಟನೆಗಳು ನಡೆದವು. ಪಟ್ಟಣದ ಯಾವುದೇ ಕಂಪ್ಯೂಟರ್‌ ಬ್ರೌಸಿಂಗ್‌ ಕೇಂದ್ರಗಳು ಮುಚ್ಚಲ್ಪಟ್ಟಿದ್ದವು. ಮನೆಗಳಲ್ಲಿ ಟಿವಿಗಳು ಬಂದಾದರೆ, ಮತ್ತೆ ಕೆಲವು ಕಡೆಗಳಲ್ಲಿ ಕುಡಿಯುವ ನೀರಿಗೂ ಸಹ ಪರದಾಡುವ ಸ್ಥಿತಿ ಉಂಟಾಗಿತ್ತು. ಆಶ್ರಯ ಕಾಲೋನಿ, ಕೃಷ್ಣಾನಗರ, ಲಕ್ಷ್ಮೀಪುರ ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗಿತ್ತು. ಇದರಿಂದ ನಾಗರಿಕರು ಕೆಇಬಿ ಸಿಬ್ಬಂದಿಗೆ ಹಿಡಿಶಾಪ ಹಾಕಿದರು.

Advertisement

 ಕೆಇಬಿ ಕಚೇರಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸುವವರೇ ಇಲ್ಲ. ವಿದ್ಯುತ್‌ ಕಚೇರಿಗೆ ದೌಡಾಯಿಸಿದ ಸಾರ್ವಜನಿಕರು ಭೇಟಿ ಮಾಡಿ ವಿಚಾರಿಸಿದರು. ಆಗ ಅಧಿಕಾರಿಗಳು ವಿದ್ಯುತ್‌ ಪರಿವರ್ತಕ ದುರಸ್ತಿಯಾದ ತಕ್ಷಣ ವಿದ್ಯುತ್‌ ಪೂರೈಸಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next