Advertisement

ಲಿಫ್ಟರ್‌ಗಳ ಶ್ರೇಷ್ಠ ನಿರ್ವಹಣೆ; ಸತತ ದ್ರವ್ಯ ಪರೀಕ್ಷೆ

07:00 AM Apr 11, 2018 | Team Udayavani |

ಗೋಲ್ಡ್‌ಕೋಸ್ಟ್‌: ಕಳೆದ ನಾಲ್ಕು ವರ್ಷಗಳಲ್ಲಿ ಪ್ರತೀ ವರ್ಷ 500 ಉದ್ದೀಪನ ಪರೀಕ್ಷೆಗಳು, ಜರ್ಮನಿಯಿಂದ ಆಮದು ಮಾಡಲಾದ ಪೌಷ್ಟಿಕ ಆಹಾರದಿಂದ ಈ ಬಾರಿಯ ಗೇಮ್ಸ್‌ನಲ್ಲಿ ಭಾರತೀಯ ವೇಟ್‌ಲಿಫ್ಟರ್‌ಗಳ 5 ಚಿನ್ನದ ಪದಕದ ಸಾಧನೆಗೆ ಕಾರಣವಾಗಿದೆ ಎನ್ನಲಾಗಿದೆ. ಹೀಗೆಂದು ಭಾರತದ ರಾಷ್ಟ್ರೀಯ ಕೋಚ್‌ ವಿಜಯ್‌ ಶರ್ಮ ಅವರೇ ಹೇಳಿದ್ದಾರೆ.

Advertisement

ಈ ಗೇಮ್ಸ್‌ನಲ್ಲಿ ಭಾರತಕ್ಕೆ ಒಟ್ಟು 5 ಚಿನ್ನ, 2 ಬೆಳ್ಳಿ ಸಹಿತ ಹಲವು ಕಂಚಿನ ಪದಕಗಳನ್ನು ಗೆದ್ದುಕೊಟ್ಟಿರುವ ವೇಟ್‌ ಲಿಫ್ಟಿಂಗ್‌ ತಂಡ ಪದಕ ಪಟ್ಟಿಯಲ್ಲಿ ಭಾರತ ಉತ್ತಮ ಸ್ಥಾನದಲ್ಲಿ ನಿಲ್ಲುವಂತೆ ನೋಡಿಕೊಂಡಿದೆ. ಲಿಫ್ಟಿಂಗ್‌ ತಂಡದ ಈ ಅಪ್ರತಿಮ ಸಾಧನೆಗೆ ಕಾರಣವೇನೆಂಬುದು ಬಹಿರಂಗಗೊಂಡಿದೆ. ಲಿಫ್ಟರ್‌ಗಳ ಈ ಸಾಧನೆಗೆ “ಕಳೆದ ನಾಲ್ಕು ವರ್ಷಗಳ ತಯಾರಿಯೇ ಕಾರಣವಾಗಿದೆ. ವೇಟ್‌ ಲಿಫ್ಟಿಂಗ್‌ ಅಭ್ಯಾಸದ ವೇಳೆ ನಾವು ಮಾಡಿಕೊಂಡ ನಿಗದಿತ ರಚನಾತ್ಮಕ ಬದಲಾವಣೆಗಳು ಹೆಚ್ಚು ಪದಕ ಗೆಲ್ಲಲು ಕಾರಣ. ಎಲ್ಲದಕ್ಕಿಂತ ಮುಖ್ಯವಾಗಿ ನಾವು ನಮ್ಮ ಆಹಾರಾಭ್ಯಾಸ ಮತ್ತು ಪೂರಕ ಪೌಷ್ಟಿಕಾಂಶಗಳ ಸೇವನೆ ಬದಲಿಸಿದ್ದೆವು’ ಎಂದು ಭಾರತದ ರಾಷ್ಟ್ರೀಯ ತರಬೇತುದಾರ ವಿಜಯ್‌ ಶರ್ಮ ಲಿಫ್ಟಿಂಗ್‌ ತಂಡದ ಸಾಧನೆಯನ್ನು ವಿಶ್ಲೇಷಿಸಿದರು.

“ಎಲ್ಲ ಕ್ರೀಡೆಗಳಿಗೂ ನ್ಪೋಟ್ಸ್‌ ಅಥಾರಿಟಿ ಆಫ್ ಇಂಡಿಯಾ (ಸಾಯ್‌) ಮೆಸ್‌ನಲ್ಲಿ ಒಂದೇ ತರದ ಆಹಾರವಿದೆ. ಆದರೆ ಪ್ರತೀ ಕ್ರೀಡಾಪಟುವಿಗೂ ವಿಭಿನ್ನ ಆಹಾರ ಅಗತ್ಯವಿರುತ್ತದೆ. ಹಾಗಾಗಿ ನಾವು ಜರ್ಮನಿಯಿಂದ ಮಟನ್‌, ಹಂದಿ ಮಾಂಸ ಮತ್ತು ಪೌಷ್ಟಿಕ  ಆಹಾರ  ತರಿಸುವಂತೆ ಕೇಳಿಕೊಂಡೆವು. ಯಾಕೆಂದರೆ ಅಲ್ಲಿಂದ ಬರುವ ಉತ್ಪಾದನೆಗಳು ಉತ್ತಮವಾಗಿರುವುದಲ್ಲದೆ ಅನುಮಾನ ರಹಿತವಾಗಿರುತ್ತದೆ’ ಎಂದು ಶರ್ಮ ತಿಳಿಸಿದರು.

ಮೀರಾಬಾಯಿ ಚಾನು, ಸಂಜಿತಾ ಚಾನು, ಸತೀಶ್‌ ಶಿವಲಿಂಗಂ, ವೆಂಕಟ್‌ ರಾಹುಲ್‌ ರಗಳ ಮತ್ತು ಪೂನಂ ಯಾದವ್‌ ಚಿನ್ನ ಗೆದ್ದರೆ, ಗುರುರಾಜ್‌ ಪೂಜಾರಿ ಮತ್ತು ಪ್ರದೀಪ್‌ ಸಿಂಗ್‌ ಬೆಳ್ಳಿ ಗೆದ್ದಿದ್ದರು. ಇನ್ನು ವಿಕಾಸ್‌ ಠಾಕೂರ್‌ (94 ಕೆಜಿ), 18ರ ಹರೆಯದ ದೀಪಕ್‌ ಲ್ಯಾಥರ್‌ (69 ಕೆಜಿ) ಗೋಲ್ಡ್‌ಕೋಸ್ಟ್‌ನಲ್ಲಿ ಕಂಚಿನ ಪದಕ ಗೆದ್ದು ಗಮನ ಸೆಳೆದಿದ್ದರು.

“ಇಲ್ಲಿರುವ ಕ್ರೀಡಾಪಟುಗಳಲ್ಲಿ ಯಾರೂ ಕೂಡ ಕಳೆದ ನಾಲ್ಕು ವರ್ಷಗಳಲ್ಲಿ ನ್ಯಾಶನಲ್‌ ಕ್ಯಾಂಪ್‌ನಿಂದ ಒಟ್ಟು 10-12ದಿನಗಳಿಗಿಂತ ಹೆಚ್ಚು ರಜೆ ತೆಗೆದುಕೊಂಡಿಲ್ಲ’ ಎಂದು ಶರ್ಮ ತಿಳಿಸಿದರು. 2012ರಿಂದಲೂ ಭಾರತೀಯ ಲಿಫ್ಟಿಂಗ್‌ ತಂಡದೊಂದಿಗೆ ಇರುವ 2014ರಿಂದೀಚೆಗೆ ಮುಖ್ಯ ಸ್ಥಾನಕ್ಕೇರಿದ್ದರು. 

Advertisement

ಲಿಫ್ಟಿಂಗ್‌ ತಂಡ ಡೋಪ್‌ ಕಂಟಕಕ್ಕೆ ಗುರಿಯಾಗದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶರ್ಮ, “ಉದ್ದೀಪನ ಮದ್ದು ಸೇವನೆಯನ್ನು ತೊಡೆದು ಹಾಕಲು ನಾವು ಬಹಳಷ್ಟು ಶ್ರಮಿಸಿದ್ದೇವೆ. ರಾಷ್ಟ್ರೀಯ ಉದ್ದೀಪನ ವಿರೋಧಿ ಸಂಸ್ಥೆಯ ಸಹಾಯದೊಂದಿಗೆ ನಾವು 2014ರಿಂದಲೂ ಪ್ರತೀವರ್ಷ ಸುಮಾರು 500 ಡೋಪ್‌ ಟೆಸ್ಟ್‌ಗಳನ್ನು ನಡೆಸುವಂತೆ ನೋಡಿಕೊಂಡೆವು. ನೀವು ಬೇಕಾದರೆ ಅದರ ದಾಖಲೆಗಳನ್ನು ಪರಿಶೀಲಿಸಬಹುದು. ನಾವು ಉದ್ದೀಪನ ಪರೀಕ್ಷೆಯ ಬಗ್ಗೆ ನಮ್ಮ ಕ್ರೀಡಾಪಟುಗಳಲ್ಲಿ ಅಷ್ಟರ ಮಟ್ಟಿಗೆ ಭಯವನ್ನು ತುಂಬಿದ್ದೇವೆ’ ಎನ್ನುತ್ತ ತಿಳಿಯಾಗಿ ನಕ್ಕರು.

Advertisement

Udayavani is now on Telegram. Click here to join our channel and stay updated with the latest news.

Next