Advertisement

ಗೋಡೆ ಮೇಲೆ ಜನಾಕರ್ಷಿಸುವ ಚಿತ್ತಾರ

05:28 PM Dec 16, 2020 | Suhan S |

ತುಮಕೂರು: ಚಿತ್ರಕಲೆ ಅನ್ನೋದು ಒಂದೇ ನೋಟಕ್ಕೆ ಎಂಥವರನ್ನೂ ಸೆಳೆದು ಬಿಡುತ್ತೆ, ಅದಲ್ಲೂ ಕಲಾವಿದಕುಂಚದಲ್ಲಿ ಅರಳುವ ಚಿತ್ರಗಳು ಸುಂದರವಾಗಿದ್ದರೆ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಶತಮಾನಕಂಡಿರುವ ಶಾಲೆಯ ಗೋಡೆಯ ಮೇಲೆ ಕಲಾವಿದನ ಕುಂಚದಿಂದ ಅರಳಿರುವ ಚಿತ್ತಾರಗಳು ಜನರನ್ನು ಆಕರ್ಷಿಸುತ್ತಿವೆ.

Advertisement

ನಗರದ ಎಂಪ್ರಸ್‌ ಶಾಲೆಯ ಗೋಡೆ ಮೇಲೆಹಾಗೂ ಶಾಲಾ ಕೊಠಡಿ ಒಳಗೆ ಅರಳಿರುವಚಿತ್ರಗಳನ್ನು ನೋಡಿದ್ರೆ ಸಾಕು ಎಂಥವರು ತಲೆ ದೂಗದೇ ಇರಲಾರರು. ನಗರದ ಎಂಪ್ರಸ್‌ ಶಾಲೆಯಲ್ಲಿಶಾಲಾ ಕೊಠಡಿ ಹಾಗೂ ಗೋಡೆಯ ಮೇಲೆ ವಿವಿಧ ರೀತಿಯ ಬಣ್ಣದಚಿತ್ತಾರ ನೋಡುಗರ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತವೆ. ಇಲ್ಲಿನಯುಕೆಜಿ, ಎಲ್‌ಕೆಜಿ ಮಕ್ಕಳಿಗಾಗಿ ಬಣ್ಣದ ಲೋಕವನ್ನೇ ಸೃಷ್ಟಿಸಲಾಗಿದೆ. ಮಕ್ಕಳಿಗೆ ಇಷ್ಟವಾಗುವ ರೀತಿಯಚಿತ್ರಗಳನ್ನೇ ಬರೆಯಲಾಗಿದ್ದು, ಇವು ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲಿವೆ.

ಮಕ್ಕಳ ಕಣ್ಣಿಗೆ ಹಬ್ಬ: ಚಿತ್ರಕಲಾ ಶಿಕ್ಷಕರ ತಂಡಇಲ್ಲಿನ ಶಾಲೆ ಗೋಡೆಗಳ ಮೇಲೆ ವಿಶೇಷ ಚಿತ್ರಗಳನ್ನು ಬರೆದಿದ್ದಾರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿವೆ. ಗಣಿತದ ಆಯಾಮ ರಚನೆ, ಹಣ್ಣು, ತರಕಾರಿ ರಾರಾಜಿಸುತ್ತಿವೆ,ಪ್ರಾಣಿಪಕ್ಷಿಗಳುಹಾರುತ್ತಿವೆಯೋನೋ ಎಂಬಂತೆ ಭಾಸವಾಗುವ ಚಿತ್ರಗಳು, ಓಡುತ್ತಿರುವ ರೈಲು,ಸೂರ್ಯನ ಉದಯ, ಪ್ರಕೃತಿ ಸೌಂದರ್ಯ, ಶಾಲಾ ಮೈದಾನ,ಹಾರುವ ಚಿಟ್ಟೆಗಳು,ಮಿಕ್ಕಿ ಮೌಸ್‌, ಛೋಟಾ ಭೀಮ್‌ ಸೇರಿದಂತೆ ವಿವಿಧಚಿತ್ರಗಳು ಶಾಲಾಗೋಡೆಗಳ ಮೇಲೆ ಅರಳಿ ನಿಂತಿವೆ.

ಮಕ್ಕಳ ಕಲಿಕೆಗೆ ಅನುಕೂಲವಾಗಲು ಸ್ಲೇಟ್‌ಗಳ ಮಾದರಿ ಚಿತ್ರ ಬರೆಯಲಾಗಿದ್ದು, ಅಲ್ಲಿಯೇ ಎಲ್‌ಕೆಜಿ,ಯುಕೆಜಿ ಮಕ್ಕಳಿಗೆ ಬರೆಯುವ ವ್ಯವಸ್ಥೆಕಲ್ಪಿಸಲಾಗಿದೆ. ಇಷ್ಟೆಲ್ಲಾ ಚಿತ್ರಗಳು ಚಿತ್ರಕಲಾ ಶಿಕ್ಷಕರಾದ ರವೀಶ್‌ಕೆ.ಎಂ., ಜಿಎಚ್‌ಎಸ್‌ ನೇರಳೇಕೆರೆ, ರಂಗಸ್ವಾಮ್ಯಯ್ಯ ಜಿಎಚ್‌ಎಸ್‌ ಚೇಳೂರು, ಇಂದ್ರಕುಮಾರ್‌ ಜಿಎಚ್‌ ಎಸ್‌ ಹೆಬ್ಬೂರು, ಆನಂದ್‌ ಜಿಎಚ್‌ಎಸ್‌ ಕೊಂಡ್ಲಿ,ವೇಣುಗೋಪಾಲ್‌ ಜಿಎಚ್‌ಎಸ್‌ ಶೇಷೇನಹಳ್ಳಿ ಹಾಗೂ ಹೀನಾ ಕೌಸರ್‌ ಜೆಜಿಜಿಸಿ ತುಮಕೂರು ಇವರ ಕೈಚಳಕದಲ್ಲಿ ಅರಳುತ್ತಿದ್ದು, ಮಕ್ಕಳ ‌ ಪಾಲಿಗೆ ಬಹು ಉಪಯುಕ್ತವಾಗಲಿದೆ.

ಮಕ್ಕಳಿಗೆ ಅನುಕೂಲ: ಕೋವಿಡ್ ಕಾರಣದಿಂದ ಎಲ್‌ ಕೆಜಿ, ಯುಕೆಜಿ ಶಾಲೆ ಆರಂಭವಾಗಿಲ್ಲ, ಇದರ ನಡುವೆ ಚಿತ್ರಕಲಾ ಶಿಕ್ಷಕರು ಮುಂದೆ ಶಾಲೆ ಆರಂಭವಾಗುವವ ವೇಳೆಗೆ ಉತ್ತಮ ಚಿತ್ರ ಬರೆದರೆ ಮಕ್ಕಳಿಗೆ ಅನುಕೂಲ ಆಗಲಿದೆ ಎಂದು ನಿರ್ಧರಿಸಿ ಚಿತ್ತಾರ ಮೂಡಿಸಿದ್ದಾರೆ. ಚಿತ್ರಕಲಾ ಶಿಕ್ಷಕರ ಕಾರ್ಯಕ್ಕೆ ಎಂಪ್ರಸ್‌ ಕಾಲೇಜಿನ ಪ್ರಾಶುಪಾಲ ಕೆ.ಎಸ್‌.ಸಿದ್ದಲಿಂಗಪ್ಪ, ಉಪ ಪ್ರಾಶುಪಾಲ ಎಸ್‌.ಕೃಷಪ್ಪ ಹಾಗೂ ಶಿಕ್ಷಣಇಲಾಖೆ ಸಹಕಾರ ನೀಡಿದೆ.

Advertisement

ಶಿಕ್ಷಕ ವೃಂದವೇ ಮೆಚ್ಚುಗೆ: ಒಟ್ಟಾರೆ ತುಮಕೂರು ಜಿಲ್ಲಾ ಚಿತ್ರ ಕಲಾ ಸಂಘಹಾಗೂ ಚಿತ್ರಕಲಾ ಶಿಕ್ಷಕರ ತಂಡಇಡೀ ಶಾಲೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಮುದ್ದುಎನಿಸುವ ಚಿತ್ರಗಳನ್ನು ಬರೆದಿದ್ದಾರೆ, ಬಣ್ಣದಲ್ಲಿಕಂಗೊಳಿಸುತ್ತಿರುವ ಶಾಲಾ ಆವರಣವನ್ನು ನೋಡಿದರೆ ಆನಂದ, ಚಿತ್ರಕಲಾ ಶಿಕ್ಷಕರ ಕಾರ್ಯಕ್ಕೆ ಇಡೀ ಶಿಕ್ಷಕ ವೃಂದವೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಶಾಲಾ ಕೊಠಡಿಹಾಗೂ ಗೋಡೆ ಮೇಲೆ ಚಿತ್ರಕಲೆಬರೆದಿರುವುದರಿಂದ ಪುಟಾಣಿ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೊಂದಲಿದ್ದಾರೆ. ಅಲ್ಲದೆ
ಚಿತ್ರಗಳು ಮಕ್ಕಳಿಗೆಇಷ್ಟವಾಗಲಿವೆ, ಆ ಚಿತ್ರಗಳು ಯಾವು,ಅದರ ಹೆಸರೇನು ಎಂಬುದನ್ನು ಮಕ್ಕಳಿಗೆ ಟೀಚರ್‌ಗಳು ತಿಳಿಸಿಕೊಡಲು ಅನುಕೂಲವಾಗಲಿದೆ. ಸರ್ಕಾರಿ ಶಾಲೆಯಲ್ಲಿಚಿತ್ರ ಬರೆಯಲು ತುಂಬಾ ಖುಷಿಯಾಯಿತು,ಯಾವ ಖಾಸಗಿ ಶಾಲೆಗೂ ಕಮ್ಮಿಇಲ್ಲ ಎಂಬಂತೆ ಎಂಪ್ರಸ್‌ನಲ್ಲಿನ ಎಲ್‌ಕೆಜಿ,ಯುಕೆಜಿ ಶಾಲೆ ಬಣ್ಣದಿಂದ ಕಂಗೊಳಿಸುತ್ತಿದೆ, ಇದು ನಮಗೆ ಹೆಮ್ಮೆಯ ಸಂಗತಿ. -ರವೀಶ್‌ಕೆ.ಎಂ., ಚಿತ್ರಕಲಾ ಶಿಕ್ಷಕ, ಜಿಎಚ್‌ಎಸ್‌ ನೇರಳೇಕೆರೆ

Advertisement

Udayavani is now on Telegram. Click here to join our channel and stay updated with the latest news.

Next