Advertisement

ಎಪಿಎಂಸಿಗಳ ಸೌಲಭ್ಯಕ್ಕೆ ಅನುದಾನ

05:17 AM May 09, 2020 | Suhan S |

ಮೈಸೂರು: ರಾಜ್ಯದ ಎಲ್ಲಾ ಎಪಿಎಂಸಿಗೆ ಬೇಕಾದ ಮೂಲ ಸೌಕರ್ಯದೊಂದಿಗೆ ಇನ್ನಿತರ ಅಭಿವೃದ್ಧಿಗೆ 200 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ರೈತರ ಹಿತದೃಷ್ಟಿಯಿಂದ ಹಲವು ಕ್ರಮಕೈಗೊಳ್ಳಲಾಗಿದೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

Advertisement

ನಗರದ ಬಂಡೀಪಾಳ್ಯ ಎಪಿಎಂಸಿ ಪ್ರಾಂಗಣದಲ್ಲಿ ಧಾನ್ಯವರ್ತಕರ ಸಂಘದಿಂದ ಆರಂಭಿಸಿದ ಭೋಜನ ಮಂದಿರವನ್ನು ರೈತರಿಗೆ ಸ್ವತಃ ಉಪಹಾರ ಬಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ರೈತರು, ಗ್ರಾಹಕರು, ವರ್ತಕರು ಉತ್ತಮ ವಾತಾವರಣದಲ್ಲಿ ದವಸ, ಧಾನ್ಯ ಮಾರಾಟ ಮಾಡುವ ಜತೆಗೆ ಬೇಕಾದ ಗೋದಾಮು, ಕೋಲ್ಡ್‌ ಸ್ಟೋರೇಜ್‌ ಒದಗಿಸಬೇಕಾಗಿದೆ. ಅದಕ್ಕಾಗಿ ಎಪಿಎಂಸಿಗೆ ಬೇಕಾದ ಸೌಕರ್ಯ ಒದಗಿಸಲು 200 ಕೋಟಿ ನೀಡಲಾಗಿದೆ ಎಂದು ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆರಂಭಿಸಲಾಗಿರುವ ಕ್ಯಾಂಟೀನ್‌ಗಾಗಿ ತಾತ್ಕಾಲಿಕವಾಗಿ ಜಾಗ ನೀಡಲು ಎಪಿಎಂಸಿ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಕ್ಯಾಂಟೀನ್‌ನನಿರ್ವಹಣೆ, ಗುಣಮಟ್ಟ ಹಾಗೂ ರೈತರೆಲ್ಲರಿಗೂ ಆಹಾರ ಸಿಗುತ್ತದೆಯೇ ಎಂಬ ಅಂಶವನ್ನು ಕೆಲ ಸಮಯಗಳ ಕಾಲ ನಿಗಾ ವಹಿಸಲಾಗುತ್ತದೆ. ಅವರ ಸೇವೆ ತೃಪ್ತಿಕರವಾಗಿದ್ದರೆ ಜಾಗದ ಖಾಯಂ ಮಂಜೂರಾತಿಗೆ ನಿರ್ಧರಿಸಲಾಗುವುದು ಎಂದರು.

ಚರ್ಚಿಸಿ ನಿರ್ಧಾರ: ಎಪಿಎಂಸಿಗೆ ಹೊಂದಿಕೊಂಡಂತೆ ಇರುವ 8 ಎಕರೆ ಮುಡಾ ಜಾಗ ಕೊಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಡನೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು. ಸಚಿವ ಭೈರತಿ ಬಸವರಾಜ್‌, ಶಾಸಕ ಜಿ.ಟಿ. ದೇವೇಗೌಡ, ಎಚ್‌.ವಿ. ರಾಜೀವ್‌, ಸಂಸದ ಪ್ರತಾಪಸಿಂಹ, ಎಪಿಎಂಸಿ ಅಧ್ಯಕ್ಷ ಆನಂದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next