Advertisement

ರಜನಿ ರಾಜಕೀಯಕ್ಕೆ ಭರ್ಜರಿ ಸ್ವಾಗತ:ಮನೆ ಮುಂದೆ ಜನಸಾಗರ 

11:18 AM Dec 31, 2017 | Team Udayavani |

ಚೆನ್ನೈ: ತಮಿಳು ನಾಡಿನ ರಾಜಕೀಯದಲ್ಲಿ ಹೊಸ ಪಕ್ಷ ಕಟ್ಟುವುದಾಗಿ ಭಾನುವಾರ ಘೋಷಿಸಿರುವಸೂಪರ್‌ ಸ್ಟಾರ್‌  ರಜನಿಕಾಂತ್‌ ಅವರಿಗೆ ಭರ್ಜರಿ ಸ್ವಾಗತ ದೊರಕಿದ್ದು ಅವರ ಪೋಯಸ್‌ ಗಾರ್ಡನ್‌ ನಿವಾಸದ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿ ಜೈ ಕಾರ ಹಾಕುತ್ತಿದ್ದಾರೆ.

Advertisement

ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹೊಸ ಪಕ್ಷ ಹುಟ್ಟು ಹಾಕುವುದಾಗಿ  ಘೋಷಿಸಿ ಮನೆಗೆ ವಾಪಾಸಾದ ರಜನಿ ಕಾಂತ್‌ ಅವರಿಗೆ ಭರ್ಜರಿ ಸ್ವಾಗತ ವ್ಯಕ್ತವಾಯಿತು. 

ಹತ್ತಾರು ಬೆಂಬಲಿಗರೊಂದಿಗೆ ಮನೆಯ ಮಹಡಿಯ ಮೇಲೆ ಬಂದ ರಜನಿಕಾಂತ್‌ ಬೆಂಬಲಿಗರತ್ತ ನಗುಮುಖದಿಂದ ಕೈ ಬೀಸಿದರು. 

ಚೆನ್ನೈ ನಗರ ಸೇರಿದಂತೆ ತಮಿಳುನಾಡಿನಾದ್ಯಂತ ಪಟಾಕಿಗಳನ್ನು ಸಿಡಿಸಿ  ಸಂಭ್ರಮಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next