Advertisement

ಶೃಂಗೇರಿ ಜಗದ್ಗುರುಗಳಿಗೆ ಭವ್ಯ ಸ್ವಾಗತ

03:20 AM Jun 29, 2017 | Karthik A |

ಕಾಸರಗೋಡು: ಅಣಂಗೂರು ಶಾರದಾ ನಗರದ ಶ್ರೀ ಶಾರದಾಂಬಾ ಭಜನಾ ಮಂದಿರದ ಶಾಶ್ವತ ಚಪ್ಪರವನ್ನು (ಮೇಲ್ಛಾವಣಿ) ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ಕಿರಿಯ ಯತಿಗಳಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಉದ್ಘಾಟಿಸಿದರು.

Advertisement

ಇದಕ್ಕೂ ಪೂರ್ವದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪರಿಸರದಿಂದ ವಾಹನ ಮೆರವಣಿಗೆ ಮೂಲಕ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮೀ ಕ್ಷೇತ್ರಕ್ಕೆ ತಲುಪಿ ಅನಂತರ ವಾದ್ಯ ಘೋಷಗಳೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ ಅಣಂಗೂರು ಶ್ರೀ ಶಾರದಾಂಬಾ ಭಜನ ಮಂದಿರಕ್ಕೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ವೇ|ಮೂ| ಹಿರಣ್ಯ ವೆಂಕಟೇಶ್‌ ಭಟ್‌ ಅಭಿನಂದನ ಭಾಷಣ ಮಾಡಿದರು. ಬಳಿಕ ಉಭಯ ಶ್ರೀಗಳು ಆಶೀರ್ವಚನ ನೀಡಿದರು. ಜೂ. 29ರಂದು ಬೆಳಗ್ಗೆ ಚತುರ್ವೇದ ಪಾರಾಯಣ, ಶ್ರೀ ಉಭಯ ಯತಿಗಳ ಪಾದಪೂಜೆ, ಭಿಕ್ಷಾವಂದನೆ, ಆಶೀರ್ವಚನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next