Advertisement

ಗ್ರಾಪಂ ಅನುದಾನ ದುರ್ಬಳಕೆ ಆರೋಪ

12:49 PM Jan 07, 2022 | Team Udayavani |

ಹುಣಸಗಿ: ತಾಲೂಕಿನ ಅಗ್ನಿ ಗ್ರಾಪಂನಲ್ಲಿ 14 ಹಾಗೂ 15ನೇ ಹಣಕಾಸು ಯೋಜನೆಯಡಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗಳು ಅನುದಾನ ದುರ್ಬಳಕೆ ಮಾಡಿಕೊಂಡಿದ್ದು, ಕೂಡಲೇ ತನಿಖೆ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯರು ತಾಪಂ ಇಒ ಅವರಿಗೆ ಮನವಿ ಸಲ್ಲಿಸಿದರು.

Advertisement

ಸಾಮಾನ್ಯ ಸಭೆ ಮಾಡದೇ ಸುಳ್ಳು ಕಾಮಗಾರಿ ಸೃಷ್ಟಿಸಿ ಹಣ ಲಪಟಾಯಿಸಲಾಗಿದೆ. ಯಾವುದೇ ವಾರ್ಡ್‍ಗಳಲ್ಲಿ ಕೆಲಸವೇ ಆಗಿಲ್ಲ. ಸರಕಾರದ ಹಣ ಕೊಳ್ಳೆ ಹೊಡೆಯಲಾಗಿದೆ. ಹೀಗಾಗಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯರು ಒತ್ತಾಯಿಸಿದರು.

ಪರಮವ್ವ, ಶರಣಗೌಡ ಮಾಲಿಪಾಟೀಲ, ಮಹಾದೇವಿ, ಭೀಮಣ್ಣ ಇಂಗಳಗಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next