Advertisement

ಪಂ. ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ ಸೈ; ಮುಂದೂಡಿಕೆ ಸೂಕ್ತ: ಜೆಡಿಎಸ್‌

07:18 AM Nov 06, 2020 | mahesh |

ಮಂಗಳೂರು/ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ ಮುಂದೂಡುವುದು ಸೂಕ್ತ ಎಂದು ತಜ್ಞರ ಸಮಿತಿ ವರದಿ ನೀಡಿರುವ ಬೆನ್ನಲ್ಲೇ ತಾನು ಚುನಾವಣೆಗೆ ಸಿದ್ಧ ಎಂದು ಬಿಜೆಪಿ ತಿಳಿಸಿದೆ. ಕಾಂಗ್ರೆಸ್‌ ಕೂಡ ಚುನಾವಣ ಆಯೋಗವು ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ ಒಮ್ಮತದ ಅಭಿಪ್ರಾಯ ಪಡೆದು ಚುನಾವಣೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದೆ. ಆದರೆ ಜೆಡಿಎಸ್‌ ಈಗಿನ ಪರಿಸ್ಥಿತಿಯಲ್ಲಿ ಚುನಾವಣೆ ಮುಂದೂಡುವುದು ಸೂಕ್ತ ಎನ್ನುವ ಮೂಲಕ ವಿರೋಧ ವ್ಯಕ್ತಪಡಿಸಿದೆ.

Advertisement

ಮಂಗಳೂರಿನಲ್ಲಿ ಪಕ್ಷದ ಕಾರ್ಯಕಾರಿಣಿ ಮತ್ತು ಕೋರ್‌ ಕಮಿಟಿ ಸಭೆಯ ಅನಂತರ ಮಾತ ನಾಡಿದ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಗ್ರಾ.ಪಂ. ಚುನಾವಣೆ ಎದುರಿಸಲು ಬಿಜೆಪಿ ಸಿದ್ಧ ಎಂದು ತಿಳಿಸಿದರು.

ಒಮ್ಮತದ ಅಭಿಪ್ರಾಯ
ಚುನಾವಣೆ ನಡೆಸುವಂತೆ ಕೋರ್ಟ್‌ ಸೂಚಿಸಿದೆ. ಚು. ಆಯೋಗವು ಎಲ್ಲ ರಾಜಕೀಯ ಪಕ್ಷಗಳ ಸಭೆ ಕರೆದು ಚರ್ಚಿಸಿ, ಒಮ್ಮತದ ಅಭಿಪ್ರಾಯ ಪಡೆದು ಚುನಾವಣೆ ನಡೆಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಈಗಿನ ಪರಿಸ್ಥಿತಿಯಲ್ಲಿ ಕಷ್ಟ
ಗ್ರಾ. ಪಂ. ಚುನಾವಣೆಯಿಂದ ಕೊರೊನಾ ಹೆಚ್ಚಿದರೆ ಅಪಾಯ. ಹೀಗಾಗಿ ಮುಂದೂಡುವುದು ಸೂಕ್ತ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next