Advertisement

ಗ್ರಾ.ಪಂ.ಚುನಾವಣೆ: ಮತದಾನ ಮಾಡಲು ಬಂದ ಜಿ.ಪಂ. ಸದಸ್ಯನ ಮೇಲೆ ಹಲ್ಲೆ!

10:38 AM Dec 27, 2020 | keerthan |

ಗದಗ: ಗ್ರಾ.ಪಂ.ಚುನಾವಣೆಗೆ ಮತದಾನ ಮಾಡಲು ಬಂದ‌ ಜಿ.ಪಂ. ಸದಸ್ಯ ಶಿವಕುಮಾರ್ ನೀಲಗುಂದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಡೆದಿದೆ.

Advertisement

ರೋಣ ತಾಲೂಕಿನ ಮೆಣಸಗಿ ಗ್ರಾಮದ ಮತಗಟ್ಟೆ ಸಂಖ್ಯೆ 105 ರಲ್ಲಿ ಶಿವಕುಮಾರ ನೀಲಗುಂದ ಮತ ಹಾಕಲು ಆಗಮಿಸಿದ್ದರು. ಈ ವೇಳೆ ಕಾಂಗ್ರೆಸನ ಹಿರೇಗೌಡ ಸಹೋದರರು ಏಕಾಏಕಿ ಶಿವಕುಮಾರ ಅವರನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎಂದು ಅರೋಪಿಸಲಾಗಿದೆ.

ಈ ವೇಳೆ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು. ಪರಸ್ಪರ ಕೈಕೈ ಮಿಲಾಯಿಸಲು ಮುಂದಾಗುತ್ತಿದ್ದಂತೆ ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು, ಲಾಠಿ ಬಿಸಿ ಮುಟ್ಟಿಸಿ, ಗುಂಪು ಚದುರಿಸಿದರು.

ಇದನ್ನೂ ಓದಿ:ಅಂಪಾರು: ವಾಹನದಲ್ಲಿ ಮತದಾರರನ್ನು ಕರೆತರುವ ವಿಚಾರದಲ್ಲಿ ವಾಗ್ವಾದ

Advertisement

ಗ್ರಾಮದಲ್ಲಿನ ರಾಜಕೀಯ ವೈಷಮ್ಯವೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.  ಘಟನೆ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.‌ ಬಳಿಕ ಸ್ಥಳಕ್ಕೆ‌ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ,  ಬಿಗಿ ಬಂಧೋಬಸ್ತ ಕಲ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next