Advertisement

ಗ್ರಾಪಂ ಚುನಾವಣೆ: 3031 ನಾಮಪತ್ರ ಸಲ್ಲಿಕೆ

04:45 PM Dec 13, 2020 | Suhan S |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಡಿ.11 ಕೊನೆ ದಿನವಾಗಿದ್ದು,ಐದು ತಾಲೂಕುಗಳಲ್ಲಿ ಒಟ್ಟು 3031 ನಾಮಪತ್ರಗಳು ಸಲ್ಲಿಕೆಯಾಗಿವೆ. ಜಿಲ್ಲೆಯ ಸಿರುಗುಪ್ಪ ಮತ್ತು ಕುರುಗೋಡು ತಾಲೂಕುಗಳಲ್ಲಿ ತಲಾ ಒಂದು ಗ್ರಾಪಂ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ.

Advertisement

ಜಿಲ್ಲೆಯ ಬಳ್ಳಾರಿ ತಾಲೂಕು, ಹೊಸಪೇಟೆ, ಸಿರುಗುಪ್ಪ, ಕುರುಗೋಡು ಮತ್ತು ಕಂಪ್ಲಿತಾಲೂಕುಗಳಲ್ಲಿನ ಒಟ್ಟು 87 ಗ್ರಾಮ ಪಂಚಾಯತ್‌ನ 1738 ಚುನಾವಣೆ ನಡೆಯಲಿದೆ. ಕಳೆದ ಡಿ.7ರಂದು ಅಧಿಸೂಚನೆ ಪ್ರಕಟವಾಗಿ ನಾಮಪತ್ರ ಸಲ್ಲಿಕೆಗೆ ಚಾಲನೆ ನೀಡಲಾಗಿದ್ದು, ಡಿ.11 ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಒಟ್ಟಾರೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪೈಕಿ ಅನುಸೂಚಿತ ಜಾತಿಯ ಪುರುಷ 339, ಮಹಿಳೆಯರು 408, ಪರಿಶಿಷ್ಟ ಪಂಗಡದ ಪುರುಷ 253, ಮಹಿಳೆಯರು 342, ಹಿಂದುಳಿದ ಅ ವರ್ಗದ ಪುರುಷ 61, ಮಹಿಳೆಯರು 105, ಹಿಂದುಳಿದ ಬಿ ವರ್ಗದಪುರುಷ 30, ಮಹಿಳೆಯರು 6, ಸಾಮಾನ್ಯ ವರ್ಗದ ಪುರುಷ 868, 629 ಮಹಿಳೆಯರು ಸೇರಿದ್ದಾರೆ. ಒಟ್ಟು 1490 ಮಹಿಳೆಯರು, 1541 ಪುರುಷರು ಸೇರಿ 3031 ನಾಮಪತ್ರ ಸಲ್ಲಿಕೆಯಾಗಿವೆ.

ಮೊದಲ ಹಂತದ ಚುನಾವಣೆಯಲ್ಲಿ ಬಳ್ಳಾರಿ ತಾಲ್ಲೂಕಿನ 25 ಗ್ರಾಮ ಪಂಚಾಯತ್‌ನ 522 ಸ್ಥಾನಗಳಿಗೆ, ಕುರುಗೋಡು ತಾಲೂಕಿನ 12ಗ್ರಾಪಂಗಳ 241, ಸಿರಗುಪ್ಪ ತಾಲೂಕಿನ 27ಗ್ರಾಪಂಗಳ 489 ಸ್ಥಾನ, ಹೊಸಪೇಟೆ ತಾಲೂಕಿನ 13 ಗ್ರಾಪಂಗಳ 274 ಸ್ಥಾನ, ಕಂಪ್ಲಿ ತಾಲ್ಲೂಕಿನ 10ಗ್ರಾಪಂನ 212 ಸದಸ್ಯತ್ವ ಸ್ಥಾನಗಳಿಗೆ ಚುನಾವಣೆನಡೆಯಬೇಕಿದೆ. ಡಿ. 17ರವರೆಗೆ ನಾಮಪತ್ರ ವಾಪಸ್‌ ಪಡೆಯಲು ಅವಕಾಶ ಇದೆ. ಡಿ. 22ರಂದು ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ.

ಇದೀಗ ಚುನಾವಣೆಯ ಮೊದಲ ಹೆಜ್ಜೆ ಮುಗಿದಂತೆ ಆಗಿದೆ. ಸಲ್ಲಿಕೆಯಾಗಿರುವನಾಮಪತ್ರಗಳ ಪರಿಶೀಲನೆ ಕಾರ್ಯ ಅದಾಗಲೇ ನಡೆದಿದೆ. ಈಗಾಗಲೇ ನಾಮಪತ್ರ ಸಲ್ಲಿಸಿದವರುಪೈಕಿ ಕೆಲವರು ಕಣದಿಂದ ಹಿಂದೆ ಸರಿಯಲಿದ್ದಾರೆ.ಸ್ಪರ್ಧಾಕಾಂಕ್ಷಿಗಳು ಯಾರನ್ನು ಹಿಂದೆ ಸರಿಸಬೇಕು,ಯಾರು ಕಣದಲ್ಲಿ ಇರಬೇಕೆಂಬುದರ ನಿರ್ಧಾರಕ್ಕೆಕಾಲಾವಕಾಶ ಇದೆ. ಈ ವೇಳೆ ಗೆಲ್ಲಲೇಬೇಕೆಂಬ ಅಭ್ಯರ್ಥಿ ತನ್ನ ಕ್ಷೇತ್ರದಲ್ಲಿರುವ ಹತ್ತಿರದ ಸ್ಪ ರ್ಧಿಯ ಮನವೊಲಿಸುವ ಕಾರ್ಯ ಮಾಡಲಿದ್ದಾರೆ. ಒಂದು ವೇಳೆ ಯಶ ಕಂಡರೆ ಕೆಲ ಸ್ಪರ್ಧಾಕಾಂಕ್ಷಿಗಳು ತಮ್ಮ ಉಮೇದುವಾರಿಕೆ ಹಿಂಪಡೆಯಲಿದ್ದಾರೆ. ಅದಾದ ನಂತರ ನಿಜವಾದ ಅಖಾಡ ಸಿದ್ಧಗೊಳ್ಳಲಿದೆ.

ಚುನಾವಣೆ ಬಹಿಷ್ಕಾರ: ಕುರುಗೋಡು ತಾಲೂಕಿನ ಬಸವಪುರ ಗ್ರಾಮವನ್ನು ಕುರುಗೋಡು ಪಟ್ಟಣ ಪಂಚಾಯತ್‌ಗೆ ಸೇರಿಸಬೇಕೆಂದು ಆಗ್ರಹಿಸಿ ಈಬಾರಿಯ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಇದೇ ಕಾರಣಕ್ಕೆ ಈ ಗ್ರಾಮದ ಒಂದು ಗ್ರಾಪಂ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ.ಇದೇ ರೀತಿ ಸಿರಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮ ಪಂಚಾಯತ್‌ ಅನ್ನು ಪಟ್ಟಣ ಪಂಚಾಯತ್‌ ಆಗಿಮೇಲ್ದರ್ಜೆಗೆ ಏರಿಸಲು ಆಗ್ರಹಿಸಿ ಈ ಬಾರಿಯಚುನಾವಣೆ ಬಹಿಷ್ಕರಿಸಿದ್ದಾರೆ. ಹೀಗಾಗಿ ಸಿರಿಗೇರಿಯ 33 ಸ್ಥಾನ, ಸಿದ್ದರಾಮಪುರದ ಒಂದು ಗ್ರಾಮ ಪಂಚಾಯತ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಆಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next