Advertisement

ಜಿ.ಪಿ.ಎಸ್‌. ಅಳವಡಿಸದೆ  ಮರಳು ಸಾಗಾಟ: 30 ಲಾರಿಗಳು ವಶಕ್ಕೆ

06:00 AM Apr 15, 2018 | |

ಬಂಟ್ವಾಳ: ಜಿಪಿಎಸ್‌ ಅಳವಡಿಸದೆ ನಿಯಮಮೀರಿ ಸಂಚರಿಸುತ್ತಿದ್ದ 30ಕ್ಕೂ ಅಧಿಕ ಮರಳು ತುಂಬಿದ ಲಾರಿಗಳನ್ನು ಎ. 14ರಂದು  ಪೊಲೀಸರು  ವಶಕ್ಕೆ ಪಡೆದಿದ್ದಾರೆ. ಶನಿವಾರ ಜಿಲ್ಲಾ ಕೇಂದ್ರದಿಂದ ಸೂಚನೆ ಬರುತ್ತಿದ್ದಂತೆ ಕಾರ್ಯಾಚರಣೆಗೆ ಮುಂದಾದ ಬಂಟ್ವಾಳ ಪೊಲೀಸರು ಫರಂಗಿಪೇಟೆ, ಬಿ.ಸಿ.ರೋಡ್‌, ಮೆಲ್ಕಾರ್‌, ಕಲ್ಲಡ್ಕ  ಜಂಕ್ಷನ್‌ಗಳಲ್ಲಿ   ಕಾರ್ಯಾಚರಣೆಗೆ ಇಳಿದಿದ್ದರು.

Advertisement

ಚೆಕ್‌ಪೋಸ್ಟ್‌ಗಳಲ್ಲಿ   ಶನಿವಾರ  ಬೆಳಗ್ಗೆ 6 ಗಂಟೆಯಿಂದ ಬಿಗಿ ತಪಾಸಣೆ ಆರಂಭವಾಗಿತ್ತು. ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ಅಕ್ಷಯ್‌ ಎಂ. ಹಾಕೆ, ಬಂಟ್ವಾಳ ಗ್ರಾಮಾಂತರ ಪಿ.ಎಸ್‌.ಐ. ಪ್ರಸನ್ನ ಕುಮಾರ್‌, ನಗರ ಠಾಣಾ ಪಿಎಸ್‌ಐ ಚಂದ್ರಶೇಖರ್‌, ಅಪರಾಧ ವಿಭಾಗದ ಪಿ.ಎಸ್‌.ಐ. ಹರೀಶ್‌, ಟ್ರಾಫಿಕ್‌ ಪೊಲೀಸ್‌ ಠಾಣೆಯ ಪಿಎಸ್‌ಐ ಯಲ್ಲಪ್ಪ  ಅವರು ಜಂಟಿಯಾಗಿ ಈ ಕಾರ್ಯಚರಣೆಯನ್ನು ನಡೆಸಿದ್ದರು.

ಚುನಾವಣೆ ನೀತಿ ಸಂಹಿತೆ ಜಾರಿ ಯಾದ ಬಳಿಕ ಅಕ್ರಮ ಮರಳು ಲಾರಿಗಳ ಸಂಚಾರ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next