Advertisement

ಜಿ.ಪಂ. ಅಧ್ಯಕ್ಷ, ತಹಶೀಲ್ದಾರ್‌ ಭೇಟಿ​​​​​​​

07:00 AM Jul 15, 2018 | Team Udayavani |

ಕಟಪಾಡಿ: ಉದ್ಯಾವರ ಗ್ರಾ. ಪಂ. ವ್ಯಾಪ್ತಿಯ ಕನಕೋಡ ಪಡುಕರೆ ಭಾಗದ ಕಡಲ ಕಿನಾರೆಯಲ್ಲಿ ತೀವ್ರ ಕಡಲ್ಕೊರೆತದಿಂದಾಗಿ ರಕ್ಷಣೆಗಾಗಿ ಹಾಕಿದ್ದ  ಕಲ್ಲುಗಳು ಸಮುದ್ರ ಪಾಲಾಗುತ್ತಿದ್ದು, ಕಾಂಕ್ರೀಟ್‌ ರಸ್ತೆಯ ಅಡಿಭಾಗದ ಮಣ್ಣು ಕುಸಿದಿದೆ.

Advertisement

ಇದೇ ರೀತಿ ಕಡಲ್ಕೊರೆತ ಮುಂದುವರಿದಲ್ಲಿ ಕಾಂಕ್ರೀಟ್‌ ರಸ್ತೆ  ಸಂಪೂರ್ಣವಾಗಿ ಕಡಲು ಪಾಲಾಗಲಿದ್ದು, ಮಲ್ಪೆ ಸಂಪರ್ಕ ರಸ್ತೆ ಕಡಿತಗೊಳ್ಳಬಹುದು ಎಂದು  ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. 

ಶನಿವಾರ ಈ ಭಾಗಕ್ಕೆ ಜಿ.ಪಂ.ಅಧ್ಯಕ್ಷ ದಿನಕರ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಪರಿಹಾರಕ್ಕೆ ಶೀಘ್ರ  ಕಾರ್ಯೋನ್ಮುಖರಾಗುವಂತೆ ಸಂಬಂಧಿತ ಅಧಿಕಾರಿಗಳೊಂದಿಗೆ ಜು. 14ರಂದು ಮಾತುಕತೆ ನಡೆಸಿದ್ದಾರೆ. 

ಉಡುಪಿ ತಾಲೂಕು ತಹಶೀಲ್ದಾರ ಪ್ರದೀಪ್‌ ಕುರುಡೇಕರ್‌, ಉದ್ಯಾವರ ಗ್ರಾ. ಪಂ.  ಸದಸ್ಯರಾದ ಕೃಷ್ಣ ಜಿ. ಕೋಟ್ಯಾನ್‌, ರವಿ ಕೋಟ್ಯಾನ್‌, ಸ್ಥಳೀಯರಾದ ಶಿವರಾಮ್‌ ಪುತ್ರನ್‌, ಸಂತೋಷ್‌, ಯತೀಶ್‌ ಮಟ್ಟು, ದೀಪಕ್‌ ಪುತ್ರನ್‌, ನಾಗರಾಜ್‌, ಗ್ರಾಮ ಲೆಕ್ಕಿಗ  ಉಪಸ್ಥಿತರಿದ್ದರು. 

ಮಟ್ಟುವಿನಲ್ಲೂ ಹಾನಿ 
ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟು ಕಡಲ ಕಿನಾರೆಯಲ್ಲೂ ಕಡಲ್ಕೊರೆತದಿಂದಾಗಿ ಸಮಸ್ಯೆಯಾಗಿದೆ. ಇಲ್ಲಿನ ಭಜನ ಮಂದಿರದ ಬಳಿಯ ಮನೆಗಳ 10ಕ್ಕೂ ಅಧಿಕ ತೆಂಗಿನ ಮರಗಳು ಸಮುದ್ರ ಪಾಲಾಗುವ ಭೀತಿಯನ್ನು ಎದುರಿಸುತ್ತಿದೆ.

Advertisement

ಲಾಲಾಜಿ ಭೇಟಿ
ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಪು ಶಾಸಕ ಲಾಲಾಜಿ ಆರ್‌.ಮೆಂಡನ್‌ ಭೇಟಿ ನೀಡಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next