Advertisement

ನೈಸ್‌ ವಿರುದ್ಧ ಮತ್ತೆ ಹೋರಾಟದ ಮುನ್ಸೂಚನೆ ನೀಡಿದ ಗೌಡರು

06:55 AM Nov 24, 2018 | |

ಬೆಂಗಳೂರು: ನೈಸ್‌ ಅಕ್ರಮದ ವಿರುದ್ಧ ಮತ್ತೆ ಹೋರಾಟ ಪ್ರಾರಂಭಿಸುವ ಮುನ್ಸೂಚನೆ ನೀಡಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಶುಕ್ರವಾರ ಹೊಸಕೆರೆಹಳ್ಳಿ ನೈಸ್‌ ರಸ್ತೆ ಬಳಿಯ ಪ್ರಮೋದ್‌ ಬಡಾವಣೆ ನಿವಾಸಿಗಳ ಅಹವಾಲು ಸ್ವೀಕರಿಸಿದರು.

Advertisement

ಪ್ರಮೋದ್‌ ಬಡಾವಣೆಯಲ್ಲಿ 17 ಎಕರೆ ಮತ್ತು ಹೊಸಕೆರೆಹಳ್ಳಿಯಲ್ಲಿ 50 ಎಕರೆ ಜಮೀನು ನೈಸ್‌ ಯೋಜನೆಗೆ ಸ್ವಾಧೀನಪಡಿಸಿಕೊಂಡಿದ್ದು, ರಸ್ತೆ ಸೇರಿ  ಮೂಲಸೌಕರ್ಯ ಕಲ್ಪಿಸಿಲ್ಲ.  ನೈಸ್‌ ಸಂಸ್ಥೆಯವರು ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು  ಈ ಸಂದರ್ಭದಲ್ಲಿ ದೂರಿದರು.

ಜಿಲ್ಲಾಧಿಕಾರಿ ವಿಜಯಶಂಕರ್‌ ಅವರನ್ನು ಸ್ಥಳಕ್ಕೆ ಕರೆಸಿಕೊಂಡ ದೇವೇಗೌಡರು ಸ್ಥಳೀಯ ನಿವಾಸಿಗಳ ದೂರುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ನಂತರ ಸುದ್ದಿಗಾರರ ಜತೆ ಮಾತನಾಡಿದ ದೇವೇಗೌಡರು,  ನೈಸ್‌ ವಿರುದ್ಧ ಹೋರಾಟ ಮಾಡಿ ಬಹಳ ದಿನವಾಗಿತ್ತು. ಯಾವ ಕಾಲದಲ್ಲಿ ಏನೇನು ಅಕ್ರಮ ನಡೆದಿದೆ ಎಂಬುದು ನನಗೆ ತಿಳಿದಿದೆ. ಸದನ ಸಮಿತಿ ವರದಿ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸುತ್ತೇನೆ. ಮೈತ್ರಿ ಸರ್ಕಾರ  ಈ ನಿಟ್ಟಿನಲ್ಲಿ ಕಾರ್ಯೋನ್ಮುವಾಗಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next