Advertisement

‘ಅನುಗ್ರಹ ಯೋಜನೆ’ ಮುಂದುವರೆಸಲು ಸರ್ಕಾರದ ಆದೇಶ

01:09 PM Oct 26, 2021 | Team Udayavani |

ಚಿತ್ರದುರ್ಗ: ಪಶುಸಂಗೋಪನೆ ಇಲಾಖೆಯ ಅನುಗ್ರಹ ಯೋಜನೆ ಮುಂದುವರೆಸಲು ಸರ್ಕಾರದ ಆದೇಶ ಆಗಿದೆ ಎಂದು ಮುಖ್ಯಮಂತ್ತಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Advertisement

ಚಿತ್ರದುರ್ಗದಲ್ಲಿ ಮಂಗಳವಾರ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಹಿತಿ ನೀಡಿದರು.

ಪಶುಪಾಲನೆ ಇಲಾಖೆಯ ವರದಿ ಪಡೆಯುವ ವೇಳೆ ಇಂದು ಬೆಳಗ್ಗೆ ಅನುಗ್ರಹ ಯೋಜನೆ ಮುಂದುವರೆಸಲು ಆದೇಶ ಮಾಡಲಾಗಿದೆ ಎಂದರು. ಆಕಸ್ಮಿಕವಾಗಿ ಮೃತಪಟ ಕುರಿಗಳಿಗೆ 5 ಸಾವಿರ, ದನಗಳಿಗೆ 10 ಸಾವಿರ ರೂ. ಹಾಗೂ ಕುರಿ‌ ಮರಿಗಳಿಗೆ 2500 ರೂ. ನೀಡಲು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಪ್ರಶ್ನೆಗಳಿಗೆ ರೈತ ಸಂಘದ ರಾಜ್ಯಾಧ್ಯಕ್ಷರು ಉತ್ತರಿಸಲಿ: ದಿದ್ದಗಿ

ಇದೇ ಯೋಜನೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಟ್ವೀಟ್ ಮಾಡಿದ್ದರು. ಶಿವಮೊಗ್ಗ ಜಿಲ್ಲೆಯ ಸಾಗರ ಬಳಿ ಕುರಿಗಾಯಿಯೊಬ್ಬರ 35 ಕುರಿಗಳು ಮೃತಪಟ್ಟಿರುವ ಪೋಟೊ ಜೊತೆಗೆ ಕಂಬಳಿ ಹೊದ್ದು ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಾಟಕ ನಿಲ್ಲಿಸಿ ಕುರಿಗಾಯಿಗಳ ಬಗ್ಗೆ ಕಾಳಜಿ ಇದ್ದರೆ ಅನುಗ್ರಹ ಯೋಜನೆಗೆ ಹಣ ಒದಗಿಸಿ ಎಂದು ಟ್ವೀಟ್ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next