Advertisement

ಜಲಾನಯನ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಡಿಸಿಎಂ ಕಾರಜೋಳ ತಾಕೀತು

02:02 PM Dec 16, 2019 | keerthan |

ಬೆಂಗಳೂರು: ಎಸ್ ಸಿಪಿ ಮತ್ತು ಟಿಎಸ್ ಪಿ ಕಾರ್ಯಕ್ರಮದಡಿ ಯಾವುದೇ ಅನುದಾನ ಲ್ಯಾಪ್ಸ್ ಆಗದಂತೆ  ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು‌ ಎಂದು ಉಪಮುಖ್ಯಮಂತ್ರಿ ಶ್ರೀ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.

Advertisement

ವಿಕಾಸೌಧದಲ್ಲಿಂದು ಇತ್ತೀಚೆಗೆ ರಾಜ್ಯ ಪರಿಷತ್ತು ಅನುಮೋದಿಸಿದ 2019-20 ನೇ ಸಾಲಿನ ಎಸ್ ಸಿ ಪಿ ಮತ್ತು ಟಿಎಸ್ ಪಿ ಯೋಜನೆಯಡಿ ಕಾರ್ಯ ಕ್ರಮಗಳ ಅನುಷ್ಠಾನ ಕುರಿತ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಯಡಿ 30 ಸಾವಿರ ಕೋಟಿ ರೂ ವೆಚ್ಚದ ಕಾರ್ಯ ಕ್ರಮಗಳಿಗೆ ಅನುಮೋದನೆಯಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಶೇ.100 ರಷ್ಟು ಪ್ರಮಾಣದಲ್ಲಿ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕು.  ರಾಜ್ಯ ಪರಿಷತ್ತಿನಲ್ಲಿ ಕಾರ್ಯಕ್ರಮಗಳಿಗೆ ಅನುಮೋದನೆಯಾಗಿರುವುದರಿಂದ ಪುನಃ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯುವ ಅಗತ್ಯ ಇಲ್ಲ. ಎಲ್ಲಾ ಇಲಾಖೆಗಳು ಯಾವುದೇ ತಾಂತ್ರಿಕ ನೆಪ ಹೇಳದೇ ತ್ವರಿತವಾಗಿ ಕಾರ್ಯಕ್ರಮ ಗಳನ್ನು ಅನುಷ್ಠಾನ ಗೊಳಿಸಬೇಕು. ಜಲಾನಯನ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಈ ಯೋಜನೆಯಡಿ ಪರಿಶಿಷ್ಟರಿಗೆ ಅನುಕೂಲವಾಗಿಲ್ಲ. ಈ ಯೋಜನೆಯಡಿ ಪರಿಶಿಷ್ಟರ ಜಮೀನಿನಲ್ಲಿ‌ ಜಲಾನಯನ ಕಾರ್ಯಕ್ರಮಗಳನ್ನು‌ ಅನುಷ್ಠಾನಗೊಳಿಸಬೇಕು. ಕೃಷಿ ಇಲಾಖೆಯು ಪರಿಶಿಷ್ಟರಿಗೆ ನೀಡುವ ಪರಿಕರಗಳ ಪ್ರಮಾಣವನ್ನು ಹೆಚ್ಚಿಸಬೇಕು. ಕಬ್ಬು ಕಟಾವು ಯಂತ್ರಗಳನ್ನು ನೀಡಬೇಕು. ‌ಆವರ್ಥ ನಿಧಿ ಯಡಿ ಪರಿಶಿಷ್ಟರ ಬೆಳೆಗಳಿಗೆ ಬೆಂಬಲ ಬೆಲೆಯಡಿ ಖರೀದಿ ಮಾಡಬೇಕು ಎಂದು ಅವರು ತಿಳಿಸಿದರು.

ಮುಂದಿನ ವರ್ಷದಿಂದ ಈ ಯೋಜನೆಯಡಿ  ಪರಿಶಿಷ್ಟರ ಕಾಲೋನಿಯಲ್ಲಿ ಸಿಸಿ ರಸ್ತೆಗಳನ್ನು ನಿಲ್ಲಿಸಲಾಗುವುದು. ಗ್ರಾಮಗಳಲ್ಲಿ ಪ್ರತಿ ವರ್ಷ ಸಿಸಿ ರಸ್ತೆಗಳನ್ನು ನಿರ್ಮಿಸಿ ಮನೆಗಳ ಬಾಗಿಲು ರಸ್ತೆ ಗಿಂತ ಬಹಳ ಕೆಳಮಟ್ಟಕ್ಕೆ ಬಂದಿದೆ. ಮುಂದಿನ ವರ್ಷ ದಿಂದ ಈ ಯೋಜನೆಯಡಿ ಶಿಕ್ಷಣ, ವಸತಿ ನಿಲಯ, ವಸತಿ ಶಿಕ್ಷಣ, ಜಮೀನು ಖರೀರಿ, ಗಂಗಾ ಕಲ್ಯಾಣ, ಸಮುದಾಯ ಭವನ ನಿರ್ಮಾಣ ಕಾರ್ಯಕ್ರಮ ಗಳಿಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಎಸ್ ಸಿಪಿ ಮತ್ತು ಟಿಎಸ್ ಪಿ ಕಾರ್ಯಕ್ರಮ ಗಳ ಸಲಹೆಗಾರರಾದ  ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ  ಕುಮಾರ್ ನಾಯಕ್, ವಿವಿಧ ಎಲಾಖೆಗಳ ಅಪರ ಮುಖ್ಯಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿ ಗಳು, ಕಾರ್ಯದರ್ಶಿಗಳು, ಮುಖ್ಯಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next