Advertisement

ಗೋವಿನಕೊಪ್ಪ ಬ್ರಹ್ಮಾನಂದ ಪರಮಹಂಸರ ಜಾತ್ರೋತ್ಸವ

01:15 PM Jan 24, 2021 | Team Udayavani |

ಕುಳಗೇರಿ ಕ್ರಾಸ್‌: ಗೋವಿನಕೊಪ್ಪ ಬ್ರಹ್ಮಾನಂದ ಪರಮಹಂಸರ 83ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಹೂ-ಹಣ್ಣು ತೆಂಗು ತಳಿರು ತೋರಣಗಳಿಂದ ಅಲಂಕರಿಸಿದ್ದ ರಥವನ್ನು ಪೂಜಾ ಕೈಂಕರ್ಯಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ಕೋವಿಡ್‌ ನಿಯಮಾವಳಿ ಪ್ರಕಾರ ಐದು ಹೆಜ್ಜೆ ಎಳೆಯುವ ಮೂಲಕ ಭಕ್ತರು ತಮ್ಮ ಧಾರ್ಮಿಕ ಆಚರಣೆ ನೆರವೇರಿಸಿದರು.

Advertisement

ಇದನ್ನೂ ಓದಿ:ಚಿರತೆ ಹಿಡಿಯಲೆಂದು ಬೋನ್ ಒಳಗೆ ಕುರಿ ಇಟ್ಟರೆ, ಚಿರತೆ ಕುರಿಯನ್ನೇ ತಿಂದು ಪರಾರಿ!

ಭಕ್ತರಿಂದ ಬ್ರಹ್ಮಾನಂದರ ಜಯಘೋಷಗಳು ಮೊಳಗಿದವು. ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ದೇವರಸಿಗೇಹಳ್ಳಿ ವೀರೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಡೋಣಿ ಗ್ರಾಮದ ಶಶಿಧರ ಶಾಸ್ತ್ರೀಜಿ ಪ್ರವಚನ ನೀಡಿದರು. ಕಮೀಟಿ ಅಧ್ಯಕ್ಷ ಕೆ. ಬಿಜಾಪುರ, ನಿಂಗನಗೌಡ ಪಾಟೀಲ, ಶಿಕ್ಷಕ ರಾಘವೇಂದ್ರ ಕಂದಗಲ್‌, ಶಿಕ್ಷಕ ಶರಣು ಕರಕಿಕಟ್ಟಿ, ಮಂಜು ದ್ಯಾವನ್ನವರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next