Advertisement

ದೇಶದಲ್ಲಿನ ರಾಜ್ಯಪಾಲರು ಈಗ ಹೊಸ ವೈಸರಾಯ್‌ಗಳಾಗಿದ್ದಾರೆ: ಚಿದಂಬರಂ

12:22 PM Oct 26, 2018 | udayavani editorial |

ಹೊಸದಿಲ್ಲಿ : ಭಾರತ – ಪಾಕಿಸ್ಥಾನ ಮಾತುಕತೆ ಬಗ್ಗೆ ಯಾವುದೇ ಹೇಳಿಕೆ ನೀಡುವ ಹಕ್ಕು ರಾಜಕೀಯ ಪಕ್ಷಗಳಿಗೆ ಇಲ್ಲ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಹೇಳಿರುವುದನ್ನು ತೀವ್ರವಾಗಿ ಟೀಕಿಸಿರುವ ಹಿರಿಯ ಕಾಂಗ್ರೆಸ್‌ ನಾಯಕ ಪಿ ಚಿದಂಬರಂ ಅವರು “ದೇಶದಲ್ಲಿನ ರಾಜ್ಯಪಾಲರು ಹೊಸ ವೈಸರಾಯ್‌ ಗಳಾಗಿದ್ದಾರೆ’ ಎಂದು ಹೇಳಿದ್ದಾರೆ.

Advertisement

ಮಾಜಿ ಕೇಂದ್ರ ಹಣಕಾಸು ಸಚಿವ ಮತ್ತು ಗೃಹ ಸಚಿವ ಪಿ ಚಿದಂಬರಂ ಅವರು ತಮ್ಮ ಸರಣಿ ಟ್ವೀಟ್‌ ಮೂಲಕ “ಭಾರತ ಮತ್ತು ಪಾಕಿಸ್ಥಾನ ನಡುವಿನ ಸಂಧಾನ ಮಾತುಕತೆಯ ಬಗ್ಗೆ ನ್ಯಾಶನಲ್‌ ಕಾನ್ಫರೆನ್ಸ್‌ ಮತ್ತು ಪೀಪಲ್ಸ್‌ ಡೆಮೋಕ್ರಾಟಿಕ್‌ ಪಾರ್ಟಿ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಪದೇ ಪದೇ ಹೇಳಿಕೆ ನೀಡುತ್ತಿರುವುದಕ್ಕೆ ರಾಜ್ಯಪಾಲರು ಈ ರೀತಿ ಹೇಳಿದ್ದಾರೆ; ಆದರೂ ಅವರು ಹಾಗೆ ಹೇಳಿರುವುದು ಸರಿಯಲ್ಲ; ಹಾಗೆ ಹೇಳುವ ಮೂಲಕ ಅವರು ರಾಜಕೀಯ ಪಕ್ಷಗಳ ಸ್ವಾತಂತ್ರ್ಯಕ್ಕೆ ಅಡ್ಡಿ ಉಂಟುಮಾಡಿದ್ದಾರೆ’ ಎಂದು ಹೇಳಿದ್ದಾರೆ. 

ಜಮ್ಮು ಕಾಶ್ಮೀರ ರಾಜ್ಯಪಾಲರು ರಾಜಕೀಯ ಪಕ್ಷಗಳಿಗೆ ಭಾರತ-ಪಾಕ್‌ ಮಾತುಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಹೇಳಿರುವಲ್ಲಿ ಅವರು ಪಕ್ಷಗಳೇ ಇಲ್ಲದ ಪ್ರಜಾಸತ್ತೆಯನ್ನು ಬಯಸುತ್ತಾರೆ ಎಂದಾಗುತ್ತದೆ; ಅಂತಿರುವಾಗ ದೇಶದಲ್ಲಿ ಪ್ರಜಾಸತ್ತೆಯೇ ಇರಲು ಸಾಧ್ಯವಿಲ್ಲ ಎಂದು ಚಿದಂಬರಂ ಹೇಳಿದರು. 

“ಲಾರ್ಡ್‌ ಮೌಂಟ್‌ ಬ್ಯಾಟನ್‌ ಅವರು ಕೊನೇ ವೈಸರಾಯ್‌ ಎಂದು ನಮಗೆ ಹೇಳಲಾಗಿತ್ತು. ಅದೀಗ ತಪ್ಪು ಅನ್ನಿಸುತ್ತದೆ. ನಿಜಕ್ಕಾದರೆ ದೇಶದಲ್ಲೀಗ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್‌ ಗವರ್ನರ್‌ಗಳು ಹೊಸ ವೈಸರಾಯ್‌ ಗಳಾಗಿದ್ದಾರೆ’ ಎಂದು ಚಿದಂಬರಂ ಲೇವಡಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next