Advertisement

ಕಟೀಲು ದೇವಸ್ಥಾನಕ್ಕೆ ರಾಜ್ಯಪಾಲ ಭೇಟಿ

12:40 PM Apr 24, 2022 | Team Udayavani |

ಕಟೀಲು: ಇಲ್ಲಿನ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೊಟ್‌ ಶನಿವಾರ ಸಂಜೆ ಭೇಟಿ ನೀಡಿ ವಿಶೇಷ ಸೇವೆ ಸಲ್ಲಿಸಿದರು. ದೇವಿಗೆ ಮೂರು ಸೀರೆಗಳನ್ನು ಸಮರ್ಪಿಸಿದರು. ಬಳಿಕ ನಂದಿನಿ ನದಿ, ದೇವಸ್ಥಾನದ ಗೋಶಾಲೆಗೆ ಭೇಟಿ ನೀಡಿ ಕಪಿಲೆ ದನಕ್ಕೆ ಹಣ್ಣು, ಹಿಂಡಿ ನೀಡಿದರು.

Advertisement

ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಆನುವಂಶಿಕ ಮೊಕ್ತೇಸರ ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರು ಗುತ್ತು, ಆನುವಂಶಿಕ ಮೊಕ್ತೇಸರ ಹಾಗೂ ಆನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ ಸ್ವಾಗತಿಸಿದರು.

ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್‌ ಆಸ್ರಣ್ಣ ಹರಿನಾರಾಯಣ ದಾಸ ಆಸ್ರಣ್ಣ, ಬಿಪಿನ್‌ ಪ್ರಸಾದ್‌ ಶೆಟ್ಟಿ ಕೊಡೆತ್ತೂರು ಗುತ್ತು, ದೇಗುಲದ ಪ್ರಬಂಧಕ ತಾರಾನಾಥ ಶೆಟ್ಟಿ, ಕೊಡೆತ್ತೂರುಗುತ್ತು, ಧಾರ್ಮಿಕ ಪರಿಷತ್‌ ಸದಸ್ಯ ಭುವನಾಭಿರಾಮ ಉಡುಪ, ಆದರ್ಶ ಶೆಟ್ಟಿ ಎಕ್ಕಾರು, ಭಾಸ್ಕರ ದಾಸ್‌ ಎಕ್ಕಾರು, ಜಿ.ಪಂ. ಕಾರ್ಯನಿರ್ವಾಹಣಾಧಿಕಾರಿ ಡಾ| ಕುಮಾರ್‌, ಪೊಲೀಸ್‌ ಅಧಿಕಾರಿ ರಂಜನ್‌ ಭಂಡಾರಿ, ಮೂಲ್ಕಿ ಠಾಣಾಧಿಕಾರಿ ಕುಸುಮಾಧರ್‌, ಮಂಗಳೂರು ವಿ.ವಿ.ಯ ಪ್ರೊ| ಜಯಪ್ಪ, ಮಂಜುನಾಥ್‌, ಮಂಗಳೂರು ತಹಶೀಲ್ದಾರ್‌ ಗುರು ಪ್ರಸಾದ್‌, ಮುಜರಾಯಿ ತಹಶೀಲ್ದಾರ್‌ ಪ್ರವೀಣ್‌, ಕಂದಾಯ ನಿರೀಕ್ಷಕ ದಿನೇಶ್‌, ಕೇಶವ ಕಟೀಲು ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next