Advertisement

Karnataka: ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವಿನಾಯಿತಿ ಪ್ರಕಟಿಸಿದ ಸರಕಾರ

11:39 PM Oct 16, 2023 | Pranav MS |

ಬೆಂಗಳೂರು: ಒಂದರಿಂದ 9ನೇ ತರಗತಿಯಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಓದುತ್ತಿರುವ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಷರತ್ತುಬದ್ಧ ಪರೀಕ್ಷಾ ವಿನಾಯಿತಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡಿದೆ. ಈ ವರೆಗೆ ಬೋರ್ಡ್‌ ಪರೀಕ್ಷೆ (10ನೇ ಮತ್ತು 12ನೇ ತರಗತಿ)ಗೆ ಮಾತ್ರ ಸೀಮಿತವಾಗಿದ್ದ ಈ ಸೌಲಭ್ಯ ಇನ್ನು ಮೌಲ್ಯಾಂಕನ ಮತ್ತು ವಾರ್ಷಿಕ ಪರೀಕ್ಷೆಗೂ ವಿಸ್ತರಣೆಗೊಳ್ಳಲಿದೆ.

Advertisement

ಅಂಧತ್ವ, ಮಿತದೃಷ್ಟಿ, ಬರೆಯಲು ದೈಹಿಕ ತೊಂದರೆ ಹೊಂದಿರುವ, ಲೋಕೋಮೋಟರ್‌ ನ್ಯೂನತೆ, ನರದೌರ್ಬಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಬರಹಗಾರ/ಓದುಗಾರರ ಸೌಲಭ್ಯದೊಂದಿಗೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಯ ತರಗತಿಗಿಂತ ಒಂದು ತರಗತಿ ಕಡಿಮೆ ಇರುವ ಬರಹಗಾರ/ಓದುಗಾರರನ್ನು ಶಾಲಾ ಮುಖ್ಯಸ್ಥರು ಅಥವಾ ಅಭ್ಯರ್ಥಿಯೇ ಆಯ್ಕೆ ಮಾಡಿಕೊಳ್ಳಬಹುದು. ನೆಲ ಮಹಡಿಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ನಡೆಸಬೇಕು. ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಶಿಕ್ಷಣ ಮಾಧ್ಯಮದ ಒಂದು ಭಾಷೆಯನ್ನು ಮಾತ್ರ ಅಧ್ಯಯನ ಮಾಡಿ ಉಳಿದ ಎರಡು ಭಾಷೆಗಳಿಗೆ ವಿನಾಯಿತಿ ನೀಡಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next