Advertisement

ಸರ್ಕಾರ ಪತನ ಹಗಲುಗನಸು: ಡಿಸಿಎಂ

07:03 AM May 30, 2020 | Lakshmi GovindaRaj |

ರಾಮನಗರ: ಬಿಜೆಪಿ ಶಾಸಕರೇ ಸರ್ಕಾರವನ್ನು ಉರುಳಿಸುತ್ತಾರೆ ಎಂಬ ಹಗಲುಗನಸು ಕಾಣುವುದನ್ನು ಕಾಂಗ್ರೆಸ್ಸಿಗರು ಬಿಡಲಿ ಎಂದು ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದರು.

Advertisement

ನಗರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅತಿ ಶೀಘ್ರದಲ್ಲೇ ಬಿಜೆಪಿ ಸರ್ಕಾರ ಪತನವಾಗುತ್ತದೆ ಎಂದು ಮಾಗಡಿಯಲ್ಲಿ ಸಂಸದ ಡಿ.ಕೆ.ಸುರೇಶ್‌ ನೀಡಿದ ಹೇಳಿಕೆಗೆ ಅವರು ತಿರುಗೇಟು ನೀಡಿದರು. ಬಿಜೆಪಿ ಯಲಿ ಯಾವ ಭಿನ್ನಮತ, ಸಮಸ್ಯೆ ಇಲ್ಲ. ಬಿ.ಎಸ್‌.ಯಡಿಯೂರಪ್ಪ ಅವರನ್ನು  ಬದಲಿಸಬೇಕು ಎಂಬ ದನಿಯೂ ಇಲ್ಲ ಎಂದರು.

ಕೆಲ ಬಿಜೆಪಿ ಶಾಸಕರು ಸಭೆ ನಡೆಸಿರುವ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿ ದ ಅವರು, ಸಭೆ ನಡೆಸುವುದು ತಪ್ಪೇ ನಿಲ್ಲ. ನಮ್ಮದೇ ಪಕ್ಷದ ಶಾಸಕರು ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಗಳ ಜೊತೆ ಮಾತನಾಡಲು ಬಯಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಲಿದೆ. 2023ರ ನಂತರವೂ ಅಧಿಕಾರಕ್ಕೆ ಬರಲಿದೆ. ಬೇರ್ಯಾವ ಪಕ್ಷ ಅಧಿಕಾರಕ್ಕೆ  ಬರಲು ಸಾಧ್ಯವಾಗದಂತೆ ಆಡಳಿತ ಕೊಡುತ್ತೇವೆ ಎಂದರು.

ಬಿಜೆಪಿ ಶಾಸಕರು ಶಿಸ್ತಿನ ಸಿಪಾಯಿ ಗಳು, ಸಂತೋಷ್‌ ಅವರಿಗೆ ರಾಜಕೀಯ ಕಾರ್ಯದರ್ಶಿ ಸ್ಥಾನ ಮಾನ ಕೊಡುವು ದು ಮುಖ್ಯಮಂತ್ರಿಗಳಿಗೆ ಅಧಿಕಾರವಿ ದೆ. ಸಂತೋಷ್‌ ಅವರು  ಚೆನ್ನಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನು ಮುಖ್ಯಮಂತ್ರಿಗಳು ಪರಿಗಣಿಸಿದ್ದಾರೆ. ಹಾಗಂತ ಉಳಿದವರು ಕಳಪೆ ಎಂದೇ ನಿಲ್ಲ. ಅರ್ಹರೆಲ್ಲರಿಗೂ ಸ್ಥಾನಮಾನ ಕೊಡಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next