Advertisement

ಸರ್ಕಾರಿ ಆಂಗ್ಲ ಶಾಲೆ ಆರಂಭ ನೋವು ತಂದಿದೆ: ಹೊರಟ್ಟಿ

11:16 PM Jun 29, 2019 | Team Udayavani |

ಧಾರವಾಡ: ಸರ್ಕಾರದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿರುವುದು ನನಗೆ ಬಹಳ ನೋವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಜೆಎಸ್‌ಎಸ್‌ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಕನ್ನಡ ಭಾಷಾ ಬೋಧಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸರ್ಕಾರ ನರ್ಸರಿಯಿಂದ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದೆ.

Advertisement

ಕನ್ನಡದ ಬಗ್ಗೆ ನಿಷ್ಕಾಳಜಿ ತೋರಲಾಗುತ್ತಿದೆ. ಅದಕ್ಕಾಗಿ ಇನ್ನು ಹೆಚ್ಚು ಆಂಗ್ಲ ಮಾಧ್ಯಮಕ್ಕೆ ಅನುಮತಿ ಕೊಡಬೇಡಿ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ಇದೇ ರೀತಿ ಅಂಗ್ಲ ಮಾಧ್ಯಮ ಸರ್ಕಾರಿ ಶಾಲೆಗಳು ಹೆಚ್ಚಾದರೆ ಕನ್ನಡ ಶಾಲೆಗಳು ಕಡಿಮೆ ಆಗುತ್ತವೆ. 2025ರ ಹೊತ್ತಿಗೆ ನಮ್ಮ ರಾಜ್ಯದಲ್ಲಿ ಕೇವಲ ಶೇ.10ರಿಂದ 15ರಷ್ಟು ಮಾತ್ರ ಕನ್ನಡ ಶಾಲೆಗಳು ಉಳಿಯುತ್ತವೆ ಎಂದು ಬೇಸರಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next