Advertisement

ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ: ರಂಗನಾಥ್‌

02:55 PM Jul 06, 2021 | Team Udayavani |

ಕುಣಿಗಲ್‌: ರಾಜ್ಯ ಸರ್ಕಾರ ವಿಪಕ್ಷಗಳ ಶಾಸಕರಿಗೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆಅನುಸರಿಸುತ್ತಿದೆ ಎಂದು ಶಾಸಕ ಡಾ.ಎಚ್‌.ಡಿ. ರಂಗನಾಥ್‌ ಗಂಭೀರ ಆರೋಪ ಮಾಡಿದರು.

Advertisement

ಲೋಕೋಪಯೋಗಿ ಇಲಾಖೆಯಿಂದ ಹಮ್ಮಿಕೊಂಡಿದ್ದ 2.20 ಕೋಟಿ ರೂ. ವೆಚದ ‌c ತಾಲೂಕಿನ ಕಸಬಾ ಹೋಬಳಿ ಕೆಂಕೆರೆ ಗ್ರಾಮದಹಳೇಯ ರಾಷ್ಟ್ರೀಯ ಹೆದ್ದಾರಿ 48 ರ ಬಿ.ಎಂ.ರಸ್ತೆಯಿಂದ ದೊಂಬರಹಟ್ಟಿ ಕ್ರಾಸ್‌ವರೆಗಿನ ರಸ್ತೆಡಾಂಬರೀಕರಣ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈವರೆಗೂ ಹಣ ಬಿಡುಗಡೆ ಮಾಡಿಲ್ಲ: ಸರ್ಕಾರ ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡುತ್ತಿದೆ. ಆದರೆ, ವಿಪಕ್ಷದಶಾಸಕರಿರುವ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿತಾರತಮ್ಯ ಮಾಡುತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ತಾಲೂಕಿನ ರಸ್ತೆ, ಇತರೆ ಕಾಮಗಾರಿಗಳಿಗೆ ಮಂಜೂರಾಗಿದ್ದ 100 ಕೋಟಿ ರೂ. ಹಣವನ್ನು ಸರ್ಕಾರ ತಡೆ ಹಿಡಿದಿದೆ. ಇದರಿಂದ ಕ್ಷೇತ್ರದ ರಸ್ತೆಅಭಿವೃದ್ಧಿ ಕುಂಠಿತಗೊಂಡಿದೆ. ಈ ಸಂಬಂಧ 11 ಬಾರಿ ಲೋಕೋಪಯೋಗಿ ಸಚಿವರು, ಒಂದು ಬಾರಿಸಿಎಂ ಯಡಿಯೂರಪ್ಪ ಅವರನ್ನು ಬೇಟಿಯಾಗಿ ತಡೆಹಿಡಿದಿರುವ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ, ಈವರೆಗೂ ಹಣ ಬಿಡುಗಡೆ ಮಾಡಿಲ್ಲ ಎಂದರು.

ತಾಲೂಕಿನಲ್ಲಿ ಶೇ.75 ಭಾಗ ಇದ್ದ ಮಣ್ಣಿನ ರಸ್ತೆಯನ್ನು300 ಕೋಟಿರೂ.ವೆಚ್ಚದಲ್ಲಿರಸ್ತೆಅಭಿವೃದ್ಧಿ ಮಾಡಲಾಗಿದೆ. ಇನ್ನೂ ಶೇ. 30 ರಷ್ಟು ರಸ್ತೆ ಆಗಬೇಕಾಗಿದೆ ಎಂದರು.

ಕೋವಿಡ್‌ ಪರಿಹಾರ ನಿಧಿ ಗೊಂದಲ: ಕೋವಿಡ್‌ ಸೋಂಕಿನಿಂದ ದುಡಿಯುವ ಕೈ, ವಯಸ್ಕರ ವ್ಯಕ್ತಿ ಮೃತಪಟ್ಟು, ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ 1ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಷೋಷಣೆ ಮಾಡಿರುವುದು ಸರಿಯಲ್ಲ. ಕೋವಿಡ್‌ನಿಂದ ಮೃತಪಡುವುದು ಸ್ವಾಭಾವಿಕಸಾವಲ್ಲ. ಅದು ಅಪಘಾತ. ಹೀಗಾಗಿ ಸರ್ಕಾರದ ನಿರ್ಧಾರ ಗೊಂದಲದಿಂದ ಕೂಡಿದೆ. ಡೆತ್‌ ಅಡಿಟ್‌ಸರಿಯಾಗಿ ಮಾಡಿಲ್ಲ. ಇದರಿಂದ ಬಹುತೇಕ ಕುಟುಂಬಗಳು ಸರ್ಕಾರದ ಪರಿಹಾರ ಹಣದಿಂದ ವಂಚಿತವಾಗಿವೆ. ಈ ಸಂಬಂಧ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದರು.

Advertisement

ಜು.8ರಂದು ಡಿಕೆಶಿ ಭೇಟಿ: ಜು.8ರಂದು ತಾಲೂಕಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಆಗಮಿಸಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನಹೇಳಿ ನೆರವು ನೀಡಲಿದ್ದಾರೆ. ಅಂದು ಬೆಳಗ್ಗೆ ಕುಣಿಗಲ್‌ ಪಟ್ಟಣ, ಬಳಿಕ ಹುಲಿಯೂರುದುರ್ಗ,ಅಮೃತೂರು, ಎಡಿಯೂರಿಗೆ ಭೇಟಿ ನೀಡಲಿದ್ದಾರೆ.ಡಿಕೆಎಸ್‌ ಚಾರಿಟಬಲ್‌ ಟ್ರಸ್ಟ್‌ನಿಂದ 2 ಸಾವಿರಉಚಿತ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹೀಗಾಗಿ ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಗ್ರಾಪಂ ಅಧ್ಯಕ್ಷೆ ಚಂದ್ರಪ್ರಭಾ, ಪಿಡಿಒ ವತ್ಸಲಾ, ಸದಸ್ಯ ದೇವರಾಜ್‌, ಮಾಜಿ ಅಧ್ಯಕ್ಷ ಅನಂತರಾಮು , ಲೋಕೋಪಯೋಗಿ ಇಲಾಖೆ ಎಇಇ ಗುರುಸಿದ್ದಪ್ಪ, ತಾಪಂ ಮಾಜಿ ಸದಸ್ಯ ಗಂಗರಂಗಯ್ಯ, ಪುರಸಭಾ ಮಾಜಿ ಸದಸ್ಯರಾದ ಪಾಪಣ್ಣ, ಶಂಕರ್‌, ಮುಖಂಡ ಪ್ರಕಾಶ್‌, ಬೇಗೂರು ನಾರಾಯಣ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next