Advertisement

ಗೌರಿ ಹತ್ಯೆ: ವಿಚಾರಣೆಗೆ ನಾಲ್ವರೂ ಗೈರು

10:14 AM Jul 31, 2018 | Team Udayavani |

ಸುಬ್ರಹ್ಮಣ್ಯ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗ‌ಳೂರಿನ ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ನೋಟಿಸ್‌ ಜಾರಿಯಾಗಿದ್ದರೂ  ಜು. 30ರಂದು ಕೊಲ್ಲ ಮೊಗ್ರದ ನಾಲ್ವರೂ ವಿಚಾರಣೆಗೆ ಹಾಜರಾಗಿಲ್ಲ. ನಾಲ್ವರು ಕೂಡ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುತ್ತಿರುವ ಮಾಹಿತಿ ಲಭ್ಯವಾಗಿದೆ.

Advertisement

ಹತ್ಯೆ ಪ್ರಕರಣ ಸಂಬಂಧ ಬೆಂಗಳೂರಿನ ಎಸ್‌ಐಟಿ ಪೊಲೀಸರು ಸುಳ್ಯ ತಾಲೂಕಿನ ಕೊಲ್ಲಮೊಗ್ರ ನಿವಾಸಿಗಳಾದ ಮೋಹನ ಚಾಂತಾಳ, ಯತೀಶ್‌ ಮೊಗ್ರ, ಯತೀನ್‌ ಅಂಬೆ ಕಲ್ಲು, ಕುಮುದಾಕ್ಷ ಜಾಲುಮನೆ ಅವರಿಗೆ ನೋಟಿಸ್‌ ಜಾರಿ ಮಾಡಿ ಜು. 30ರಂದು ಬೆಂಗಳೂರಿನಲ್ಲಿ ತನಿಖಾ ತಂಡದ ಮುಂದೆ ಹಾಜರಾಗುವಂತೆ ಸೂಚಿಸಿದ್ದರು.
ಆದರೆ ಅವರು ಸೆಷನ್ಸ್‌ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದು ನ್ಯಾಯಾಲಯದ ಮೂಲಕ ಹೇಳಿಕೆ ನೀಡಲು ನಿರ್ಧರಿಸಿದ್ದಾರೆ. ಈ ಸಂಬಂಧ ಮಂಗಳೂರು ಮತ್ತು ಬೆಂಗ ಳೂರಿನಲ್ಲಿ ನಿರೀಕ್ಷಣಾ ಜಾಮೀನಿಗೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಗೌರಿ ಹತ್ಯೆ ಸಂಬಂಧ ಬಂಧನ ದಲ್ಲಿರುವ ಆರೋಪಿಗಳು ನೀಡಿದ ಮಾಹಿತಿ ಆಧಾರದಲ್ಲಿ ಈ ನಾಲ್ವರಿಗೆ ನೋಟಿಸ್‌ ಜಾರಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next