Advertisement

ರೈತರ ಮೂಗಿಗೆ ತುಪ್ಪ ಸವರುವ ಕೆಲಸ

11:56 AM Jul 06, 2018 | |

ಮೈಸೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ರೈತರ ಬೆಳೆ ಸುಸ್ತಿ ಸಾಲ 2ಲಕ್ಷ ರೂ.ವರೆಗೆ ಮನ್ನಾ ಮಾಡಲು ಷರತ್ತು ವಿಧಿಸಿರುವುದು ಬಹುತೇಕ ರೈತರಿಗೆ ಸಹಕಾರಿಯಲ್ಲ. ಸಿದ್ದರಾಮಯ್ಯ 50 ಸಾವಿರ ರೂ.ವರೆಗೆ ಸಾಲಮನ್ನಾ ಮಾಡಿದಾಗ 20 ಲಕ್ಷ ರೈತರು ನವೀಕರಣ ಮಾಡಿಕೊಂಡಿದ್ದಾರೆ.

Advertisement

ಅದರಂತೆ ಈ ರೈತರು ಸುಸ್ತಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಹೇಳಿದ್ದಾರೆ. ಬಹುತೇಕ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿ ಪ್ರೋತ್ಸಾಹ ಧನ ಸಿಗುತ್ತದೆ ಎಂದು ನವೀಕರಣ ಮಾಡಿಕೊಂಡಿದ್ದಾರೆ.

ಹೀಗಾಗಿ ಕುಮಾರಸ್ವಾಮಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಸಾಲಮನ್ನಾ ಘೋಷಣೆಯಲ್ಲಿ 2017ರ ಡಿಸೆಂಬರ್‌ 31 ನಿಗದಿಪಡಿಸಿರುವುದು ರೈತರನ್ನು ಮೋಸಗೊಳಿಸುವ ಕುತಂತ್ರದ ಭಾಗವಾಗಿದೆ.

ಸುಸ್ತಿ ಸಾಲಮನ್ನಾ ಎಂಬುದನ್ನು ಕೈ ಬಿಟ್ಟು 31.3.2018ರವರೆಗೆ ಅವಧಿ ವಿಸ್ತರಿಸಿ ಬೆಳೆ ಸಾಲ ಮನ್ನಾ ಎಂದು ತಿದ್ದುಪಡಿ ಮಾಡಬೇಕು.ನವೀಕರಣ ಮಾಡಿರುವ ಸಾಲಗಾರ ರೈತರಿಗೆ 25 ಸಾವಿರ ವಾಪಸ್‌ ನೀಡುವುದು ಭಿಕ್ಷೆ ನೀಡಿದಂತಾಗುತ್ತದೆ. ಇದು ಸರಿಯಾದ ಕ್ರಮವಲ್ಲ.ಸರ್ಕಾರ ನಿರ್ಧಾರ ಬದಲಿಸದಿದ್ದಲ್ಲಿ ರೈತರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next