Advertisement

ಗೋರಖ್‌ನಾಥ ದೇಗುಲ ದಾಳಿ ಆರೋಪಿಗೆ ಹನಿಟ್ರ್ಯಾಪ್‌?

07:56 PM Apr 08, 2022 | Team Udayavani |

ಲಕ್ನೋ: ಉತ್ತರ ಪ್ರದೇಶದ ಗೋರಖ್‌ಪುರದ ಗೋರಖ್‌ನಾಥ ದೇಗುಲದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ.

Advertisement

ಪ್ರಕರಣದ ಆರೋಪಿಯಾಗಿರುವ ಮುರ್ತಾಜಾ ಅಬ್ಟಾಸಿಯು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯಿಂದ ಹನಿಟ್ರ್ಯಾಪ್‌ ಆಗಿರುವುದಾಗಿ ತನಿಖೆ ನಡೆಸುತ್ತಿರುವ ಎಟಿಎಸ್‌ ಹೇಳಿದೆ.

ಮಹಿಳೆ ಅಬ್ಟಾಸಿಗೆ ಇ-ಮೇಲ್‌ ಮಾಡಿ, ತಾನು ಐಸ್‌ ಉಗ್ರ ಸಂಘಟನೆಯವಳು. ಭಾರತದಲ್ಲಿ ಅಬ್ಟಾಸಿಯನ್ನು ಭೇಟಿ ಮಾಡುವುದಾಗಿಯೂ ಆಕೆ ತಿಳಿಸಿದ್ದಾಳೆ.

ಇದನ್ನೂ ಓದಿ:ಬುಲ್ಡೋಜರ್ ಬಳಕೆ ಮಾಫಿಯಾಗಳಿಗೆ ಮಾತ್ರ, ಬಡವರಿಗೆ ಅಲ್ಲ: ಅಧಿಕಾರಿಗಳಿಗೆ ಯೋಗಿ

ಒಟ್ಟು 3 ಬಾರಿ ಆಕೆಗೆ ಅಬ್ಟಾಸಿ ಹಣ ವರ್ಗಾವಣೆ ಮಾಡಿದ್ದಾನೆ. ಅವಳ ಜೊತೆ ಚಾಟಿಂಗ್‌ ಮಾಡಿದ ನಂತರ ತಾನೂ ಐಎಸ್‌ ಸೇರಲು ನಿರ್ಧರಿಸಿದ್ದಾನೆ ಎಂದು ಎಟಿಎಸ್‌ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next