Advertisement

ಲಾಕ್ ಡೌನ್ ಗೆ ಸುರತ್ಕಲ್ ನಲ್ಲಿ ಉತ್ತಮ ಪ್ರತಿಕ್ರಿಯೆ: ವ್ಯಾಪಾರ ವಹಿವಾಟು ಸ್ಥಗಿತ

12:44 PM Jul 16, 2020 | keerthan |

ಸುರತ್ಕಲ್: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಒಂದು ವಾರದ ಲಾಕ್ ಡೌನ್ ವಿಧಿಸಿದ್ದು, ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಮಂಗಳೂರು ಮಹಾನಗರ ಪಾಲಿಕೆ ಉಪವಿಭಾಗೀಯ ವ್ಯಾಪ್ತಿಯ ಸುರತ್ಕಲ್ ನಲ್ಲಿ ಗುರುವಾರ ಲಾಕ್ ಡೌನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಗತ್ಯ ವಸ್ತುಗಳ. ಅಂಗಡಿ ಹೊರತು ಪಡಿಸಿ ಎಲ್ಲಾ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ರೈಲ್ವೆ ನಿಲ್ದಾಣಕ್ಕೆ ಹೋಗುವವರಿಗೆ ಅವಕಾಶ ಮಾಡಿಕೊಡಲಾಗಿತ್ತು. ಇನ್ನು ಉಡುಪಿ ಜಿಲ್ಲೆಯ ಗಡಿಯನ್ನು ಮುಚ್ಚಲಾದ ಕಾರಣ ಹೆದ್ದಾರಿಯಲ್ಲೂ ವಾಹನದ  ಹೆಚ್ಚಿನ ಓಡಾಟ  ಇರಲಿಲ್ಲ.

ಪೊಲೀಸರು ದ್ವಿಚಕ್ರ, ಕಾರುಗಳ ತಪಾಸಣೆ ನಡೆಸುತ್ತಿದ್ದು ಅಗತ್ಯ ಕಾರಣಗಳಿಗಾಗಿ ಓಡಾಡುತ್ತಿದ್ದಾರೆಯೆ ಎಂದು ದೃಢ ಪಡಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next