Advertisement

ಕಸ-ರಸ ಪ್ರಯತ್ನಕ್ಕೆ ಮೆಚ್ಚುಗೆ ಮಾತು

11:30 AM Aug 17, 2019 | Suhan S |

ಬ್ಯಾಡಗಿ: ಪಟ್ಟಣದಲ್ಲಿ ಉತ್ಪತ್ತಿ ಆಗುವ ಕಸವನ್ನು ರಸ ಮಾಡುವ ನಿಟ್ಟಿನಲ್ಲಿ ವಿನೂತನ ಪೈಪ್‌ ಕಾಂಪೋಸ್ಟ್‌ ಪ್ರಯೋಗ ಪ್ರಯತ್ನವೊಂದಕ್ಕೆ ಕೈ ಹಾಕಿರುವ ಸ್ಥಳೀಯ ಪುರಸಭೆ ಅಧಿಕಾರಿಗಳ ನಡೆಗೆ ಸಾರ್ವಜಕನಿರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಪಟ್ಟಣವನ್ನು ಸುಂದರ ಹಾಗೂ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಸ್ಥಳೀಯ ಪುರಸಭೆ ಹಲವಾರು ಹೊಸ ಹೊಸ ಪ್ರಯೋಗ ಮಾಡಿ ಈಗಾಗಲೇ ಯಶಸ್ಸು ಕಂಡಿದೆ. ಇದರಲ್ಲಿ ಪ್ರಮುಖವಾಗಿ ಘನತಾಜ್ಯ ವಿಲೇವಾರಿ, ಹಸಿ ಕಸ ಒಣ ಕಸ ವಿಂಗಡಣೆ, ಸೇರಿದಂತೆ ಎನ್‌ಜಿಒಗಳ ಸಹಕಾರದೊಂದಿಗೆ ಮನೆ ಮನೆ ಕಸ ಸಂಗ್ರಹಣೆ ಮಾಡುವ ಮೂಲಕ ಸ್ವಚ್ಛತೆಗೆ ಒತ್ತು ನೀಡಿದೆ. ಇದರ ಜೊತೆಯಲ್ಲಿ ಪುರಸಭೆ ಇದೀಗ ಮತ್ತೂಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಜಿಲ್ಲೆಯಲ್ಲಿ ಮೊದಲು: ಹಲವಾರು ಪ್ರಯತ್ನಗಳ ನಡುವೆ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ನಡುವೆಯು ಸಾರ್ವಜನಿಕರ ಎಲ್ಲೆಂದರಲ್ಲಿ ಕಸ ಹಾಕುವ ಪರಿಪಾಠಕ್ಕೆ ಮುಕ್ತಿ ಸಿಕ್ಕಿರಲಿಲ್ಲ. ಇದೀಗ ಪುರಸಭೆ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಥಳೀಯ ಪುರಸಭೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜೊತೆಯಲ್ಲಿ ಕಸವನ್ನು ರಸ (ಗೊಬ್ಬರ) ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಜಿಲ್ಲೆಯ ಪಾಲಿಗೆ ಪ್ರಥಮವೆನಿಸಿದೆ.

ಪೈಪ್‌ ಕಾಂಪೋಸ್ಟ್‌ ವಿಧಾನ: ಕಸವನ್ನು ರಸ ಮಾಡುವ ನಿಟ್ಟಿನಲ್ಲಿ ಪುರಸಭೆ ಮಾಡುತ್ತಿರುವ ಪೈಪ್‌ ಕಾಂಪೋಸ್ಟ್‌ ಪ್ರಯೋಗ ಇಗಾಗಲೇ ಹಲವರ ಗಮನ ಸೆಳೆದಿದೆ. ಮನೆಯಲ್ಲಿ ಉತ್ಪಾದನೆಯಾಗುವ ಹಸಿ ಕಸ (ತರಕಾರಿ, ಗಿಡಗಳ ಎಲೆ,) ಸೇರಿದಂತೆ ಮಣ್ಣಲ್ಲಿ ಸುಲಭವಾಗಿ ಕರಗುವ ತಾಜ್ಯಗಳನ್ನು ತಮ್ಮ ಮನೆ ನಿವೇಶನದ ಹತ್ತಿರದಲ್ಲಿನ ಖಾಲಿ ಸ್ಥಳದಲ್ಲಿ ಒಂದರಿಂದ ಒಂದುವರೆ ಅಡಿಯಲ್ಲಿ ಗುಂಡಿಯೊಂದನ್ನು ತೆಗೆದು ಅದರಲ್ಲಿ 8 ಇಂಚು ಸುತ್ತಳೆತೆಯ, 6 ಅಡಿ ಎತ್ತರ ಪೈಪ್‌ಅನ್ನು ವಿದ್ಯುತ್‌ ಕಂಬದ ರೀತಿಯಲ್ಲಿ ನಿಲ್ಲಿಸಿ ನಂತರ ಪೈಪ್‌ ಒಳಗಡೆಯಲ್ಲಿ ಮೊದಲು ಸಗಣಿ ಗೊಬ್ಬರ ಹಾಗೂ ಒಂದು ಕೆಜಿ ಬೆಲ್ಲವನ್ನು ಹಾಕಿದ ನಂತರ ಅದರಲ್ಲಿ ಮನೆಯಲ್ಲಿ ಉಳಿದ ಹಸಿ ಕಸವನ್ನು ಪ್ರತಿ ದಿನ ಹಾಕುತ್ತಾ ಬರಬೇಕು.

ಕಸ ಗೊಬ್ಬರವಾಗಿ ಪರಿವರ್ತನೆ: ಪ್ರತಿ ದಿನ ಕಸ ಹಾಕುವುದರ ಜೊತೆಯಲ್ಲಿ ವಾರಕ್ಕೊಮ್ಮೆ ಒಂದು ಹಿಡಿ, ಮಣ್ಣು ಸೇರಿದಂತೆ ನೀರನ್ನು ಹಾಕುತ್ತಾ ಬಂದಲ್ಲಿ 3 ತಿಂಗಳ ಅವಧಿಯಲ್ಲಿ ಕಸವು ಉತ್ತಮ ಹಾಗ ಗುಣ ಮಟ್ಟದ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಸದ ಸಮಸ್ಯೆಗೆ ಕಡಿಮೆ ಕರ್ಚಿನಲ್ಲಿ ಕಡಿವಾಣ ಹಾಕಬಹುದಾಗಿದೆ. ಈ ಉತ್ಪಾದನೆಯಾದ ಗೊಬ್ಬರವನ್ನು ತಮ್ಮ ಮನೆಯ ಗಿಡಗಳಿಗೆ ಕುಂಡಲಗಳಿಗೆ ಉಪಯೋಗಿಸುವುದು ಸೇರಿದಂತೆ ಹೆಚ್ಚಿನದ್ದನ್ನು ಸೂಕ್ತ ಮೊತ್ತ ನೀಡಿ ಪುರಸಭೆ ಖರೀದಿಸುವ ಭರವಸೆ ನೀಡಿದೆ. ಇದರಿಂದ ಕಸದಿಂದಲೂ ಆದಾಯ ಗಳಿಸಬಹುದಾಗಿದೆ.

Advertisement

ಒಟ್ಟು 4 ಕಡೆ ಪ್ರಯೋಗ: ಈ ವಿನೂತನ ಪ್ರಯೋಗವನ್ನು ಪಟ್ಟಣದ ಪುರಸಭೆ ಆವರಣ, ನೀರು ಶುದ್ಧಿಕರಣ ಘಟಕ, ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ರಾಯೋಗಿಕವಾಗಿ ಸಿದ್ದಪಡಿಸಲಾಗಿದೆ. ಮತ್ತು ಪಟ್ಟಣದ ಇನ್ನೂ ಹಲವೆಡೆಗಳಲ್ಲಿ ಹಲವೆಡೆಗಳಲ್ಲಿ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ. ಪುರಸಭೆ ಆವರಣದಲ್ಲಿ ಪ್ರಯೋಗ ಮಾಡುವ ಸಮಯದಲ್ಲಿ ಪುರಸಭೆಗೆ ಆಗಮಿಸಿದ್ದ ಸ್ನೇಹ ಸದನ ಸಮಿತಿ ಸದಸ್ಯರು ಇದರಿಂದ ಪ್ರಭಾವಿತರಾಗಿ ತಮ್ಮ ಆವರಣದಲ್ಲಿ ಅಳವಡಿಸಿಕೊಂಡಿದ್ದು ಪ್ರಯೋಗ ಮುಂದಿನ ದಿನಗಳಲ್ಲಿ ಯಶಸ್ಸು ಕಾಣುವ ವಿಶ್ವಾಸ ಪುರಸಭೆ ಸಿಬ್ಬಂದಿ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next