Advertisement

ಧಾರವಾಡದಲ್ಲಿ ಭಾರತ್ ಬಂದ್ ಗೆ ಉತ್ತಮ ಪ್ರತಿಕ್ರೀಯೆ: ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತ

12:29 PM Dec 08, 2020 | sudhir |

ಧಾರವಾಡ: ಎಪಿಎಂಸಿ ಹಾಗೂ ಕೃಷಿಗೆ ಮಾರಕವಾಗಿರುವ ಕಾಯ್ದೆ ರದ್ದತಿಗೆ ಆಗ್ರಹಿಸಿ ಕೇಂದ್ರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ನಡೆಸುತ್ತಿರುವ ಬಂದ್ ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಬಂದ್ ಹಿನ್ನೆಲೆ ಜುಬಿಲಿ ವೃತ್ತಕ್ಕೆ ಚಕ್ಕಡಿ ತಂದ ಜಯ ಕರ್ನಾಟ ಸಂಘಟನೆ ಕಾರ್ಯಕರ್ತರು ಚಕ್ಕಡಿಯಲ್ಲಿ ವೃತ್ತಕ್ಕೆ ಸುತ್ತು ಹಾಕಿ‌ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ವಿಭಿನ್ನವಾಗಿ ಪ್ರತಿಭಟಿಸಿದರು.

ಭಾರತ ಬಂದ್ ಕರೆ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ.

ಬೆಳಗ್ಗೆಯೇ ಪ್ರತಿಭಟನಾಕಾರರು ಬಸ್ ತಡೆ ಮಾಡಿದ ಪರಿಣಾಮ ಮಾರ್ಗ ಬದಲಾಯಿಸಿ ಸಂಚಾರ ನಡೆಸುತ್ತಿರುವ ಸಾರಿಗೆ ಬಸ್ ಗಳನ್ನು ಅಲ್ಲಲ್ಲಿ ತಡೆದು ನಿಲ್ಲಿಸಲಾಗಿದೆ.

ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಹೋರಾಟಗಾರರಿಂದ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ಬಳಿಕ ಬಸ್ ಸಂಚಾರ ಸ್ಥಗಿತಗೊಂಡಿತು. ಹೊಸ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ರೈತರು ಬಂದ್ ಗೆ ಬೆಂಬಲ ನೀಡುವಂತೆ ಕೈ ಮುಗಿದು ಮನವಿ ಮಾಡಿದರು.

Advertisement

ಇದನ್ನೂ ಓದಿ:ಭಾರತ್ ಬಂದ್ : ಚಿಕ್ಕಮಗಳೂರಿನಲ್ಲಿ ಪ್ರತಿಭಟನಾಕಾರರು ಮತ್ತು ವರ್ತಕರ ಮಾತಿನ ಚಕಮಕಿ

ಇನ್ನು ಎಡ ಪಕ್ಷಗಳ ಕಾರ್ಯಕರ್ತರು ಜಾಗೃತಿ ಗೀತೆಗಳನ್ನು ಹಾಡಿ ರಸ್ತೆ ತಡೆ ನಡೆಸಿದರು.

ಮಂಗಳವಾರ ನಡೆಯಬೇಕಿದ್ದ ವಿಳ್ಯದೆಲೆ ಮಂಡಿಗೆಗಳ ಹರಾಜು ನಿಲ್ಲಿಸಿದ ವ್ಯಾಪಾರಿಗಳು ಬಂದ್ ಗೆ ಬೆಂಬಲ ನೀಡಿದರೆ, ಬೀದಿ ಬದಿ ವ್ಯಾಪಾರಿಗಳು ಕೂಡ ಬಂದ್ ಗೆ ಬೆಂಬಲ ನೀಡಿದ್ದಾರೆ. ಭಾರತ್ ಬಂದ್ ಗೆ ಧಾರವಾಡ ಜಿಲ್ಲೆಯ ಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next