Advertisement

Mangaluru ಹೋಮ್‌ನರ್ಸ್‌ನಿಂದ ಚಿನ್ನ ಕಳವು

08:24 PM Nov 04, 2023 | Team Udayavani |

ಮಂಗಳೂರು: ಹೋಮ್‌ನರ್ಸ್‌ ತಾನು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿದೆ.

Advertisement

ಕದ್ರಿ ಬಾಳೆಬೈಲಿನ ಮನೆಯೊಂದರಲ್ಲಿ ಸೆ.6ರಿಂದ 30ರವರೆಗೆ ಹೋಮ್‌ನರ್ಸ್‌ ಆಗಿ ಕೆಲಸ ಮಾಡಿಕೊಂಡಿದ್ದ ಕಾವ್ಯಾ ಅಲ್ಲಿನ ಮಹಿಳೆಯೋರ್ವರ ಅಂದಾಜು 2 ಲ.ರೂ. ಮೌಲ್ಯದ ಸುಮಾರು 35 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಳ್ಳತನ ಮಾಡಿ ತಾಯಿಯ ಅನಾರೋಗ್ಯದ ನೆಪ ಹೇಳಿ ಆಕೆಯ ಊರಾದ ಮಂಡ್ಯಕ್ಕೆ ಹೋದವಳು ವಾಪಸ್‌ ಬಂದಿಲ್ಲ. ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next