Advertisement

ಬಹಿರಂಗ ಹೇಳಿಕೆ ನೀಡಲ್ಲ : ರಮೇಶ ಜಾರಕಿಹೊಳಿ 

05:38 PM Jun 27, 2021 | Team Udayavani |

ಅಡಹಳ್ಳಿ: ಕೊಕಟನೂರ ಗ್ರಾಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಭೇಟಿ ನೀಡಿ ಜಿಪಂ ಸದಸ್ಯ ಸಿದ್ಧಪ್ಪ ಮುದಕಣ್ಣವರ ಅವರ ಪತ್ನಿ ಇತ್ತೀಚೆಗೆ ನಿಧನರಾದ ಹಿನ್ನಲೆಯಲ್ಲಿ ಸಿದ್ದಪ್ಪ ಅವರಿಗೆ ಸಾಂತ್ವನ ಹೇಳಿದರು.

Advertisement

ಈ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರಾ? ಎಂದು ಪ್ರಶ್ನಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ವರಿಷ್ಠರು ಹಾಗೂ ಹಿರಿಯರು ನನಗೆ ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ಖಡಕ್‌ ಸಂದೇಶ ನೀಡಿದ್ದಾರೆ. ಕಾರಣ ಇನ್ನೂ 8-10 ದಿನಗಳವರೆಗೆ ಏನನ್ನೂ ಮಾತನಾಡುವುದಿಲ್ಲ. ನಮ್ಮ ಆಪ್ತರಾದ ಐನಾಪುರದ ರವೀಂದ್ರ ಗಾಣಿಗೇರ ಹಾಗೂ ಕೊಕಟನೂರದ ಸಿದ್ಧಪ್ಪ ಮುದಕಣ್ಣವರ ಅವರ ಪತ್ನಿ ನಿಧನರಾದ ಹಿನ್ನೆಲೆಯಲ್ಲಿ ಭೇಟಿಯಾಗಿ ಸಾಂತ್ವನ ಹೇಳಲು ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಚರ್ಚೆ ಬೇಡ ಎಂದು ತಿಳಿಸಿದರು.

ಶಾಸಕ ಮಹೇಶ ಕುಮಠಳ್ಳಿ, ಮುಖಂಡರಾದ ಕಿರಣಕುಮಾರ ಪಾಟೀಲ, ಟಿ.ಆರ್‌. ಕಾಗಲ್‌, ರಮೇಶ ಮುದಕಣ್ಣವರ, ನಿಂಗಪ್ಪ ನಂದೇಶ್ವರ, ಮುತ್ತಪ್ಪ ಕಾಡದೇವರಮಠ, ಕುಮಾರ ವೀರಗೌಡ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next