Advertisement
ಮಣಿಪಾಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಕೊಪ್ಪಳ, ಗದಗ, ಚಾಮರಾಜನಗರ, ಕೊಡಗು, ಕಾರವಾರಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆದಿದ್ದು ಬಾಗಲಕೋಟೆ, ಹಾವೇರಿ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಯಾದಗೀರ್ನಲ್ಲಿ ತೆರೆಯುವ ಪ್ರಸ್ತಾವವಿದೆ. ಇದಕ್ಕೆ ಆರ್ಥಿಕ ಇಲಾಖೆ ಅನುಮತಿ ನಿರೀಕ್ಷಿಸುತ್ತಿದ್ದೇವೆ ಎಂದರು.
ಸರಕಾರಿ ಸ್ವಾಮ್ಯದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ. ಬಡಜನರಿಗೆ ಅನುಕೂಲವಾಗುವುದು ನಮ್ಮ ಉದ್ದೇಶ. ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆಯನ್ನು ಮೈಸೂರು, ಕಲಬುರಗಿಯಲ್ಲಿ ತೆರೆದಿದ್ದೇವೆ. ಹುಬ್ಬಳ್ಳಿ ಕಿಮ್ಸ್ನಲ್ಲಿ ಈ ವರ್ಷ ತೆರೆಯಲಾಗುವುದು. ಕಿದ್ವಾಯಿ ಆಸ್ಪತ್ರೆಯ ಶಾಖೆಯನ್ನು ಕಲಬುರಗಿಯಲ್ಲಿ ಒಂದು ತಿಂಗಳಲ್ಲಿ ಆರಂಭಿಸಲಾಗುವುದು. ಮಂಡ್ಯದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ತೆರೆಯಲಿದ್ದೇವೆ ಎಂದು ಹೇಳಿದರು.
Related Articles
ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮಾಂತರ ಪ್ರದೇಶದಲ್ಲಿ ಸರಕಾರಿ ಸೀಟಿನ ಕೋಟಾದಿಂದ ಕಲಿತವರು ಕಡ್ಡಾಯವಾಗಿ ಸೇವೆ ಸಲ್ಲಿಸಬೇಕೆಂಬ ಕಾಯಿದೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದರು. ನೀಟ್ ಪರೀಕ್ಷೆಯಿಂದ ವ್ಯವಸ್ಥೆ ಪಾರದರ್ಶಕವಾಗಲಿದೆ ಎಂದರು. ಗೋಷ್ಠಿಯಲ್ಲಿ ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಉಪಸ್ಥಿತರಿದ್ದರು.
Advertisement
ಉಡುಪಿಯಲ್ಲಿ ಕಾಲೇಜು ಸದ್ಯ ಇಲ್ಲಉಡುಪಿಯಲ್ಲಿ ಸದ್ಯ ವೈದ್ಯಕೀಯ ಕಾಲೇಜು ತೆರೆಯುವ ಪ್ರಸ್ತಾವವಿಲ್ಲ. ಮುಂದಿನ ಹಂತಗಳಲ್ಲಿ ತೆರೆಯಲಿದ್ದೇವೆ ಎಂದು ಡಾ| ಪಾಟೀಲ್ ಹೇಳಿದರು. ಶುಲ್ಕ ನಿಗದಿ: ಇಂದು ಸಭೆ
ವೈದ್ಯಕೀಯ ಸೀಟಿನ ಶುಲ್ಕ ನಿಗದಿಪಡಿಸಲು ಮಾ. 1ರಂದು ಸಭೆ ನಡೆಯಲಿದೆ ಎಂದು ಸಚಿವರು ತಿಳಿಸಿದರು.