Advertisement

D. K. Shivakumar ಆಸ್ತಿ ಮಾರಿ ಜನರಿಗೆ 15 ಲಕ್ಷ ಕೊಡಲಿ: ಯತ್ನಾಳ್‌

06:40 PM Apr 12, 2024 | Team Udayavani |

ಕಾರವಾರ: ಉಪಮುಖ್ಯಮಂತ್ರಿ, ಕನಕಪುರಬಂಡೆ ಪದೇ ಪದೇ 15 ಲಕ್ಷದ ವಿಷಯ ಮಾತಾಡುತ್ತಿದ್ದಾರೆ. ಜನರ ಆಕೌಂಟ್‌ಗೆ ಮೋದಿಯ ಹಣ ಬಂದಿಲ್ಲ ಎಂದು ಜಪ ಮಾಡುತ್ತಿದ್ದಾರೆ.

Advertisement

ಡಿ.ಕೆ.ಶಿವಕುಮಾರ್‌ ಅವರೇ ನಿಮ್ಮ ಆಸ್ತಿ ಮಾರಿದರೆ ಕರ್ನಾಟಕದ ಪ್ರತಿ ಪ್ರಜೆಗೆ 15 ಲಕ್ಷ ರೂ. ಹಾಕಬಹುದು ಆ ಕೆಲಸ ಮೊದಲು ಮಾಡಿ ಎಂದು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಅವರು, ನಾನು ಹೇಳಿದಂತೆ ಕೇಳು. ನಿನ್ನ ಆಸ್ತಿ ಮಾರಿ, ಜನರ ಆಕೌಂಟ್‌ಗೆ ದುಡ್ಡು ಹಾಕು. ಮೋದಿ ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಸುಮ್ಮನೆ ಮಾತನಾಡುವ ಬದಲು ಆಸ್ತಿ ಮಾರಿ ಎಲ್ಲರ ಅಕೌಂಟ್‌ಗೆ ದುಡ್ಡು ಹಾಕಪಾ. ಡಿಕೆಶಿ ಹಾಗೇ ನಮ್ಮ ಕಡೆ ಪ್ರಿಯಾಂಕ್‌ ಖರ್ಗೆ ಅಂತಾ ಒಬ್ಬ ಇದಾನ. ಅವನೂ ಸಹ ಬಿಜೆಪಿಯವರು 15 ಲಕ್ಷ ರೂ. ಹಾಕಿಲ್ಲ ಅಂತ ಪದೇ ಪದೇ ಹೇಳ್ತಿರ್ತಾನೆ. ಪ್ರಿಯಾಂಕ್‌ ನಿಮ್ಮ ಅಪ್ಪ ಮಾಡಿದ ಆಸ್ತಿ ಬೇಕಾದಷ್ಟಿದೆ. ನಿನ್ನ ಆಸ್ತಿ ಮಾರಿ ಕರ್ನಾಟಕದ ದಲಿತರಿಗೆ ಮನೆ ಕಟ್ಟಿಕೊಡು. ಸುಮ್ಮನೆ ದಲಿತರ ಪರ ಅಂತಾ ಮಾತಾಡೋದಲ್ಲ. ಅವರಿಗಾಗಿ ನಿನ್ನ ಆಸ್ತಿ ಸ್ವಲ್ಪ ಖರ್ಚು ಮಾಡು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next