Advertisement

Godse’s statement: ನ್ಯಾ.ಅಭಿಜಿತ್‌ ಟಿಕೆಟ್‌ ವಾಪಸ್‌ಗೆ ಕಾಂಗ್ರೆಸ್‌ ಒತ್ತಾಯ

09:21 PM Mar 26, 2024 | Team Udayavani |

ಕೋಲ್ಕತ್ತಾ: “ಮಹಾತ್ಮಾ ಗಾಂಧಿ ಮತ್ತು ನಾಥುರಾಂ ಗೋಡ್ಸೆ ನಡುವೆ ಯಾರನ್ನು ಆಯ್ಕೆ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ” ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಭ್ಯರ್ಥಿ ನ್ಯಾ.ಅಭಿಜಿತ್‌ ಗಂಗೋಪಾಧ್ಯಾಯ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

Advertisement

ಈ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌, “ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನದಲ್ಲಿ ಇದ್ದಂಥ ಗಂಗೋಪಾಧ್ಯಾಯ ಅವರು ಇಂಥ ಹೇಳಿಕೆ ನೀಡಿರುವುದು ದುರದೃಷ್ಟಕರ. ಅವರಿಗೆ ಪ್ರಧಾನಿ ಮೋದಿಯವರ ನೇರ ಆಶೀರ್ವಾದ ಇದೆ ಎನ್ನುವುದು ಸ್ಪಷ್ಟ. ಇಂಥ ಅಭ್ಯರ್ಥಿಯನ್ನು ಬಿಜೆಪಿ ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ಚಾನೆಲ್‌ವೊಂದರ ಸಂದರ್ಶನದ ವೇಳೆ ಅಭಿಜಿತ್‌ ಗಂಗೋಪಾಧ್ಯಾಯ ಅವರು, “ಕಾನೂನು ವೃತ್ತಿಯಲ್ಲಿದ್ದ ನಾನು ಗೋಡ್ಸೆ ಮತ್ತು ಮಹಾತ್ಮ ಗಾಂಧಿ ಬರಹಗಳನ್ನೂ ಓದಿ ತಿಳಿದುಕೊಳ್ಳಬೇಕು. ಒಂದು ಭಾಗವನ್ನು ತಿಳಿದುಕೊಂಡರೆ ಸಾಲದು’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next