Advertisement

Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

10:36 AM Apr 12, 2024 | Team Udayavani |

ಬಳ್ಳಾರಿ: ಚುನಾವಣೆ ಬಳಿಕ ಕಾಂಗ್ರೆಸ್ ನವರು ಕೌರವರಾಗುತ್ತಾರೆ. ಬಿಜೆಪಿಯವರು ಪಾಂಡವರಾಗುತ್ತಾರೆ. ಮೋದಿ ಪ್ರಧಾನಿಯಾಗುತ್ತಾರೆ. ಚುನಾವಣೆ ಬಳಿಕ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ. ಬಹುತೇಕ ನಾಯಕರು ಇಂಡಿಯಾ ಒಕ್ಕೂಟದಿಂದ ಹೊರಗೆ ಬರುತ್ತಿದ್ದಾರೆ ರಾಹುಲ್ ಗಾಂಧಿ ಒಬ್ಬಂಟಿಯಾಗಲಿದ್ದಾರೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಆಧರ್ಮ ಇರುವ ಕಾರಣ ಪಕ್ಷ ಬಿಡುತ್ತಿದ್ದಾರೆ. ಕಾಂಗ್ರೆಸ್ ಪರಿಸ್ಥಿತಿ ಅಯೋಮಯವಾಗಿದೆ. 60 ವರ್ಷ ಅಳಿದರೂ ಜನರಿಗೆ ಒಳ್ಳೆಯ ಮಾಡದ ಕಾರಣ ಜನರು ತಿರಸ್ಕಾರ ಮಾಡುತ್ತಾರೆ. ಮೋಸ, ಅನ್ಯಾಯ, ಭ್ರಷ್ಟಾಚಾರ, ಜಾತಿಯ ವಿಷ ಬೀಜ ಬಿತ್ತುವ ಕಾರಣ ಕಾಂಗ್ರೆಸ್ ನವರು ಕೌರವರಾಗಿದ್ದಾರೆ. ಭಾರತಕ್ಕಾಗಿ ಮೋದಿಗಾಗಿ ಬಿಜೆಪಿಗೆ ಮತ ಹಾಕಿ ಎಂದರು.

ಬಸವೇಶ್ವರ, ಅಂಬೇಡ್ಕರ್, ಕನಕದಾಸ, ವಾಲ್ಮೀಕಿ ಮೂರ್ತಿ ಸ್ವಚ್ಛಗೊಳಿಸಿ ಪೂಜೆ ಮಾಡಿ ನಾಮಪತ್ರ ಸಲ್ಲಿಸುತ್ತೇನೆ. ಸೂರ್ಯಚಂದ್ರ ಇರುವುದುದು ಎಷ್ಟು ಸತ್ಯವೋ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಅಷ್ಟೇ ಸತ್ಯ. ನಾಮಪತ್ರ ಸಲ್ಲಿಕೆ ವೇಳೆ ವಿಜಯೇಂದ್ರ, ಆನಂದ ಸಿಂಗ್, ಶಾಸಕರಾದ ನೇಮಿರಾಜ್ ನಾಯ್ಕ ಕೃಷ್ಣ ನಾಯಕ್ ಉಪಸ್ಥಿತರಿರಲಿದ್ದಾರೆ ಎಂದರು.

ಶ್ರೀರಾಮುಲು ಅವರು ಇಂದು ಬಳ್ಳಾರಿಯ ಮೋತಿ ವೃತ್ತದಲ್ಲಿರುವ ಬಸವೇಶ್ವರ ಪುತ್ತಳಿಗೆ ಪೂಜೆ ಸಲ್ಲಿಸಿದರು. ನೀರಿನಿಂದ ತೊಳೆದು ಮೂರ್ತಿ ಶುಚಿ ಮಾಡಿದ ಶ್ರೀರಾಮುಲು ಬಳಿಕ ಹೂವಿನ ಹಾರ ಹಾಕಿ, ಮಂಗಳರಾತಿ ಮಾಡುವ ಮೂಲಕ ನಾಮಪತ್ರ ಪ್ರಕ್ರಿಯೆಗೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next