Advertisement

ಗೋಧ್ರಾ ಹತ್ಯಾಕಾಂಡ ಕೇಸ್; ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

03:29 PM Aug 27, 2018 | Team Udayavani |

ಅಲಹಾಬಾದ್: ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಎಸ್ ಐಟಿ ಕೋರ್ಟ್ ಸೋಮವಾರ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಮೂವರನ್ನು ಖುಲಾಸೆಗೊಳಿಸಿದೆ.

Advertisement

2002ರಲ್ಲಿ ಸಾಬರ್ ಮತಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ 59 ಮಂದಿ ಕರಸೇವಕರು ಇದ್ದ ಎರಡು ಬೋಗಿಗಳಿಗೆ ಗೋಧ್ರಾದಲ್ಲಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಜೀವಂತವಾಗಿ ಸುಟ್ಟು ಹಾಕಲಾಗಿತ್ತು.

ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಚ್ ಸಿ ವೋರಾ, 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದ ಸಂಚಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಫಾರೂಖ್ ಭಾನಾ ಹಾಗೂ ಇಮ್ರಾನ್ ಶೇರುಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಪ್ರಕರಣದಲ್ಲಿ ಹುಸೈನ್ ಸುಲೇಮಾನ್ ಮೋಹನ್, ಕಾಸಂ ಭಾಮೇಡಿ ಹಾಗೂ ಫಾರುಕ್ ಧಾಂಟಿಯಾ ಸೇರಿ ಮೂವರನ್ನು ವಿಶೇಷ ಎಸ್ ಐಟಿ ಕೋರ್ಟ್ ಖುಲಾಸೆಗೊಳಿಸಿದೆ. ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಐವರನ್ನೂ 2015-16ರಲ್ಲಿ ಬಂಧಿಸಿದ್ದು, ಸಾಬರಮತಿ ಸೆಂಟ್ರಲ್ ಜೈಲಿನಲ್ಲಿ ವಿಶೇಷ ಕೋರ್ಟ್ ರಚಿಸಿ ವಿಚಾರಣೆ ಆರಂಭಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next