Advertisement

Godhra case ಮತ್ತೆ ಮುಂದಕ್ಕೆ ಹಾಕಲ್ಲ, ಜ.15ಕ್ಕೆ ವಿಚಾರಣೆ: ಸುಪ್ರೀಂ

01:23 AM Sep 27, 2024 | Team Udayavani |

ಹೊಸದಿಲ್ಲಿ: 2002ರ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಸರಕಾರ ಹಾಗೂ ಹಲವು ಅಪರಾಧಿಗಳು ಸಲ್ಲಿಸಿರುವ ಮನವಿ ಗಳ ವಿಚಾರಣೆಯನ್ನು ಮತ್ತೆ ಮುಂದಕ್ಕೆ ಹಾಕುವುದಿಲ್ಲ. ಜ.15ರಿಂದ ವಿಚಾರಣೆ ಕೈಗೆತ್ತಿಕೊಳ್ಳಲಾಗು ವುದು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸ್ಪಷ್ಟ ಪಡಿ ಸಿದೆ. ಗುಜರಾತ್‌ ವಕೀಲರು ವಿಚಾರಣೆ ಮುಂದಕ್ಕೆ ಹಾಕು­ವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಸುಪ್ರೀಂ ತನ್ನ ನಿರ್ಧಾರವನ್ನು ತಿಳಿಸಿದೆ. 2002ರ ಗೋಧ್ರಾ ಪ್ರಕರಣ­ದಲ್ಲಿ ವಿಚಾರಣ ನ್ಯಾಯಾಲಯವು 11 ಆರೋಪಿ­ಗಳಿಗೆ ಗಲ್ಲು ಶಿಕ್ಷೆ ಮತ್ತು 20 ಆರೋಪಿಗಳಿಗೆ ಜೀವಾ­ವಧಿ ಶಿಕ್ಷೆ ವಿಧಿಸಿತ್ತು. ಆದರೆ ಹೈಕೋರ್ಟ್‌ 11 ಆರೋ­ಪಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಗುಜರಾತ್‌ ಹೈಕೋರ್ಟ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next