Advertisement

ಪ್ರವಾಸಿಗರಿಂದ ಹೆಚ್ಚಿನ ಶುಲ್ಕ ವಸೂಲಿ: ಕೆಲ ಟ್ಯಾಕ್ಸಿ ಚಾಲಕರ ವರ್ತನೆಯಿಂದ ಪ್ರವಾಸೋದ್ಯಮಕ್ಕೆ ಧಕ್ಕೆ

05:08 PM Dec 18, 2022 | Team Udayavani |

ಪಣಜಿ: ಸದ್ಯ ಗೋವಾದಲ್ಲಿ ಪ್ರವಾಸಿಗರನ್ನು ನಿಲ್ಲಿಸಿ ಟ್ಯಾಕ್ಸಿ ಚಾಲಕರು ಸೃಷ್ಟಿಸುತ್ತಿರುವ ಅವ್ಯವಸ್ಥೆ ತೀರಾ ತಪ್ಪು. ಅವರ ವರ್ತನೆಯಿಂದ ಗೋವಾದಲ್ಲಿ ಇಡೀ ಪ್ರವಾಸೋದ್ಯಮ ವ್ಯವಹಾರಕ್ಕೆ ಧಕ್ಕೆಯಾಗಿದೆ ಎಂದು ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಗಣೇಶ್ ಗಾಂವ್ಕರ್ ಹೇಳಿದ್ದಾರೆ.

Advertisement

ಗೋವಾದ ದೂದ್ ಸಾಗರ ಜಲಪಾತದ ಆನ್‍ಲೈನ್ ಬುಕಿಂಗ್ ವೆಬ್‍ಸೈಟ್‍ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಗೋವಾದ ಧಾರಾಬಾಂದೋಡಾದಲ್ಲಿ ಆಯೋಜಿಸಿದ್ದ ಈ ಸಮಾರಂಭದಲ್ಲಿ  ಮೀಸಲು ಅರಣ್ಯ ಇಲಾಖೆಯ ಉಪ ಅರಣ್ಯಾಧಿಕಾರಿ ಆನಂದ್ ಜಾಧವ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ತೆಂಡೂಲ್ಕರ್, ದೂದ್ ಸಾಗರ ಜಿಪಂ ಅಧ್ಯಕ್ಷ ಅಶೋಕ್ ಖಂಡೇಪಾರ್ಕರ್ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದೂದ್ ಸಾಗರ ಜಲಪಾತ ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಸರ್ಕಾರ ಆನ್‍ಲೈನ್ ಬುಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇದು ಪ್ರವಾಸೋದ್ಯಮ ವ್ಯವಹಾರಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ. ದೂದ್ ಸಾಗರ ಪ್ರವಾಸೋದ್ಯಮ ವ್ಯವಹಾರಕ್ಕೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಸ್ಥಳದಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಡಾ. ಗಣೇಶ ಗಾಂವಕರ್ ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ದೂದ್ ಸಾಗರ ಜೀಪ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಖಾಂಡೆಪಾರ್ಕರ್ ಮಾತನಾಡಿ-  ದೂದ್ ಸಾಗರ ಜಲಪಾತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ವ್ಯವಹಾರದಲ್ಲಿ ತೊಡಗಿರುವ ಕೆಲವು ಜೀಪ್ ಸವಾರರು ಪ್ರವಾಸಿಗರಿಗೆ ಹೆಚ್ಚಿನ ಶುಲ್ಕ ವಿಧಿಸಿ ದರೋಡೆ ಮಾಡುತ್ತಿದ್ದರು. ಸರ್ಕಾರ ಆನ್‍ಲೈನ್ ವೆಬ್‍ಸೈಟ್ ಪ್ರಾರಂಭಿಸಿರುವುದರಿಂದ ಪ್ರವಾಸಿಗರು ಜೀಪ್ ಪ್ರಯಾಣದ  ಬೆಲೆಯನ್ನು ಹೆಚ್ಚಿಸಿ ಸುಲಿಗೆ ಮಾಡಲು ಸಾಧ್ಯವಾಗುವುದಿಲ್ಲ. ಸರ್ಕಾರದ ಆನ್‍ಲೈನ್ ಉಪಕ್ರಮವನ್ನು ನಾವು ಸ್ವಾಗತಿಸುತ್ತೇವೆ ಎಂದರು.

Advertisement

ಇದನ್ನೂ ಓದಿ: ದಾವಣಗೆರೆ: ವೀರಶೈವ ಲಿಂಗಾಯತ ಮಹಾಸಭಾದ 23 ನೇ ಅಧಿವೇಶನ ಮುಂದೂಡಿಕೆ

Advertisement

Udayavani is now on Telegram. Click here to join our channel and stay updated with the latest news.

Next