Advertisement

ಪಾರೀಕರ್‌ ಕೊನೆಯುಸಿರಿಗೆ ಬಿಜೆಪಿ ಕಾಯುತ್ತಿತ್ತು : ಸಂಜಯ್‌ ನಿರುಪಮ್‌

05:55 AM Mar 19, 2019 | udayavani editorial |

ಹೊಸದಿಲ್ಲಿ : ಗೋವೆಯಲ್ಲಿ  ಬಿಜೆಪಿಯ ಹೊಸ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ನಸುಕಿನ 1.50ರ ವೇಳೆಯೊಳಗೆ ಅತ್ಯಂತ ತರಾತುರಿಯಿಂದ ನಡೆದಿರುವುದನ್ನು  ಪ್ರಶ್ನಿಸುವ ಮೂಲಕ ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ವಿವಾದ ಸೃಷ್ಟಿಸಿದ್ದಾರೆ. 

Advertisement

ಮುಂಬಯಿ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿರುವ ಸಂಜಯ್‌ ನಿರುಪಮ್‌ ಇಂದು ಮಂಗಳವಾರ ಬೆಳಗ್ಗೆ ಮಾಡಿರುವ ವಿವಾದಾತ್ಮಕ ಟ್ವೀಟ್‌ ಹೀಗಿದೆ :

ಗೋವೆಯಲ್ಲಿ ನಸುಕಿನ 1.30ರ ಹೊತ್ತಿಗೆ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿರುವುದು ಗೊತ್ತಾಯಿತು. ಇದರಲ್ಲಿನ ತರಾತುರಿಯನ್ನು ಕಂಡಾಗ ಮನೋಹರ್‌ ಪಾರೀಕರ್‌ ಕೊನೆಯುಸಿರೆಳುವುದನ್ನೇ ಬಿಜೆಪಿ ಕಾಯುತ್ತಿತ್ತೇನೋ ಎಂದನ್ನಿಸಿತು. ಕನಿಷ್ಠ ಪಾರೀಕರ್‌ ಅವರ ಚಿತಾ ಭಸ್ಮವನ್ನು ಮುಳುಗಿಸುವ ತನಕವಾದರೂ ಅವರು (ಬಿಜೆಪಿ) ಕಾಯಬಹುದಿತ್ತು’.

ಸಂಜಯ್‌ ನಿರುಪಮ್‌ ಅವರು ತಮ್ಮ ಟ್ವೀಟ್‌ ನಲ್ಲಿ  ನೂತನ ಮುಖ್ಯಮಂತ್ರಿಯ ತರಾತುರಿಯ ಪ್ರಮಾಣ ವಚನವನ್ನು ಟೀಕಿಸಿರುವರಾದರೂ ಗೋವೆಯಲ್ಲಿ ಸರಕಾರ ರಚಿಸುವ ಹಕ್ಕನ್ನು ತಮ್ಮ ಪಕ್ಷ ಕಾಂಗ್ರೆಸ್‌ ಮಂಡಿಸಿದ್ದುದರ ಬಗ್ಗೆ ಚಕಾರ ಎತ್ತದಿರುವುದು ಅಚ್ಚರಿಯ ವಿಷಯವಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next