Advertisement

ಕರ್ನಾಟಕ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಗೋವಾ

06:10 AM Aug 21, 2018 | Team Udayavani |

ಪಣಜಿ: ನ್ಯಾಯಾಧಿಕರಣ ತೀರ್ಪು ನೀಡುವ ಮುನ್ನವೇ ಕರ್ನಾಟಕವು ಮಹಾದಾಯಿ ನದಿ ನೀರನ್ನು ತಿರುಗಿಸಿಕೊಂಡ ಕುರಿತಂತೆ ಗೋವಾ ಸರ್ಕಾರವು ಕರ್ನಾಟಕದ ವಿರುದ್ಧ ಸೋಮವಾರ ನ್ಯಾಯಾಧಿಕರಣದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ. 

Advertisement

ಇದರಿಂದಾಗಿ ಮಹದಾಯಿ ನದಿ ನೀರು ಪ್ರಕರಣ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದಂತಾಗಿದೆ.  ಅನೇಕ ವರ್ಷಗಳಿಂದ ಟ್ರಿಬ್ಯುನಲ್‌ನಲ್ಲಿದ್ದ ಮಹದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಮೂರು ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಆದರೆ ಕರ್ನಾಟಕಕ್ಕೆ ಮಹದಾಯಿಯ  ಹನಿ ನೀರನ್ನೂ ಕೊಡುವುದಿಲ್ಲ ಎಂದು ಹೇಳುತ್ತಿದ್ದ ಗೋವಾಕ್ಕೆ ಈ ತೀರ್ಪು ಬೇಸರ ತಂದಿತ್ತು. ಇದೀಗ ಮಹದಾಯಿ ಪ್ರಕರಣವನ್ನು ಮತ್ತೆ ಗೋವಾ ಸರ್ಕಾರವು ನ್ಯಾಯಾಲಯಕ್ಕೆ ಒಯ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next