Advertisement

ಗೋವಾ ಕಾಂಗ್ರೆಸ್ ನಲ್ಲಿ ತಲ್ಲಣ; ನಾವಿನ್ನೂ ಪಕ್ಷದಲ್ಲಿದ್ದೇವೆ ಎಂದ ಲೋಬೋ

02:30 PM Jul 11, 2022 | Team Udayavani |

ಪಣಜಿ : ನಾವಿನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿದ ನಂತರ ಕಾಂಗ್ರೆಸ್ ಶಾಸಕ ಮೈಕೆಲ್ ಲೋಬೋ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ಎಐಸಿಸಿ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರು ಪಕ್ಷದ ಹಿರಿಯ ನಾಯಕರಾದ ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೊ ಅವರು ಬಿಜೆಪಿಯೊಂದಿಗೆ ಸಂಚು ರೂಪಿಸಿ ರಾಜ್ಯದ 11 ಶಾಸಕರ ಪೈಕಿ ಎಂಟು ಶಾಸಕರ ಪಕ್ಷಾಂತರಕ್ಕೆ ವೇದಿಕೆ ಸಿದ್ದ ಮಾಡಿದ್ದಾರೆ ಎಂದು ಭಾನುವಾರ ಆರೋಪಿಸಿದ್ದರು.

ಸೋಮವಾರ ಪೊರ್ವೊರಿಮ್‌ನಲ್ಲಿ ಆರಂಭವಾದ ಎರಡು ವಾರಗಳ ಗೋವಾ ವಿಧಾನಸಭೆಯ ಅಧಿವೇಶನಕ್ಕಾಗಿ ಕಾಮತ್ ಮತ್ತು ಲೋಬೋ ಇಬ್ಬರೂ ವಿಧಾನಸಭೆ ಸಂಕೀರ್ಣಕ್ಕೆ ಆಗಮಿಸಿದರು.

ಮೈಕೆಲ್ ಲೋಬೋ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಪತ್ನಿಯ ಕ್ಷೇತ್ರದಲ್ಲಿ ಸುಮಾರು 6000 ಮನೆಗಳಿಗೆ ಹಾನಿಯಾಗಿದೆ ಮತ್ತು ಮರಗಳು ನೆಲಕ್ಕುರುಳಿವೆ. ಹೀಗಾಗಿ ಸಿಎಂ ನಿವಾಸಕ್ಕೆ ತೆರಳಿದ್ದರು. ಆಕೆಯನ್ನು ಬೆಳಗ್ಗೆ ಕರೆಯಲಾಗಿತ್ತು, ಸಿಎಂ ಲಭ್ಯವಿರಲಿಲ್ಲ, ಸಂಜೆ ಆಕೆಗೆ ಕರೆ ಮಾಡಿದರು, ಆದ್ದರಿಂದ ಅವರು ಹೋಗಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

‘ದಿನೇಶ್ ಗುಂಡೂರಾವ್ ಅವರ ಹೇಳಿಕೆಯಿಂದ ನನಗೆ ತುಂಬಾ ನೋವಾಗಿದೆ’ ಎಂದು ಕಾಮತ್ ಹೇಳಿದ್ದು, ನಾನು ಶನಿವಾರ ರಾತ್ರಿ ನನ್ನ ನಿವಾಸದಲ್ಲಿ ಗುಂಡೂರಾವ್ ಅವರನ್ನು ಭೇಟಿಯಾದೆ. ಲೋಬೊ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿದ ನಂತರ ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯವು ಕುಸಿದಿದೆ ಎಂದು ಅವರಿಗೆ ತಿಳಿಸಿರುವುದಾಗಿ ಕಾಮತ್ ಹೇಳಿದರು. ಕಾಮತ್ ಅವರು ಹಿಂದಿನ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆಗಿದ್ದರು.

Advertisement

ಯಾರ ಅಗತ್ಯವೂ ಇಲ್ಲ

ನಮಗೆ ಯಾರ ಅಗತ್ಯವೂ ಇಲ್ಲ, 25 ಶಾಸಕರ ಬೆಂಬಲದೊಂದಿಗೆ ಸ್ಥಿರ ಸರ್ಕಾರವಿದೆ. ಕಾಂಗ್ರೆಸ್ ಗೆ ಯಾವುದೇ ಸಂಬಂಧವಿಲ್ಲದ ಕಾರಣ, ಅವರು ಈ ಆರೋಪ-ಆಟದ ನಾಟಕ ಮಾಡುತ್ತಿದ್ದಾರೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next