Advertisement

ಗೋವಾ ಬಿಜೆಪಿ ಸರ್ಕಾರ ಜನತೆಯ ಪ್ರೀತಿ ಕಳೆದುಕೊಂಡಿದೆ : ದಿನೇಶ್ ಗುಂಡೂರಾವ್

05:28 PM Jun 19, 2021 | Team Udayavani |

ಪಣಜಿ: ಗೋವಾ ಬಿಜೆಪಿ ಸರ್ಕಾರ ಜನತೆಯ ಪ್ರೀತಿ ಕಳೆದುಕೊಂಡಿದೆ. ರಾಜ್ಯದ ಜನತೆ ಬಯಸದ ಯೋಜನೆಗಳನ್ನು ಜನರ ಮೇಲೆ ಹೇರಲಾಗಿದೆ. ಈ ಯೋಜನೆಗಳು ಗೋವಾದ ಪರಿಸರವನ್ನು ನಾಶಪಡಿಸುತ್ತಿವೆ ಎಂದು ಕಾಂಗ್ರೆಸ್ ಗೋವಾ ಪ್ರಭಾರಿ ದಿನೇಶ್ ಗುಂಡೂರಾವ್ ಗೋವಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಮಡಗಾಂವನಲ್ಲಿ ಶನಿವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಗೋವಾ ಬಿಜೆಪಿ ಸರ್ಕಾರದ ಬಳಿ ಯಾವುದೇ ನೈತಿಕತೆ ಉಳಿದಿಲ್ಲ. ಕಾನೂನು ಬಾಹಿರವಾಗಿ ಅಧಿಕಾರ ಉಳಿಸಿಕೊಳ್ಳಲು ಎಲ್ಲ ಕೆಲಸವನ್ನೂ ಬಿಜೆಪಿ ಮಾಡುತ್ತಿದೆ. ಬಿಜೆಪಿಯನ್ನು ಸೋಲಿಸಬಲ್ಲ ಏಕೈಕ ಪಜಕ್ಷವೆಂದರೆ ಅದುವೇ ಕಾಂಗ್ರೇಸ್ ಪಕ್ಷ. ಕಳೆದ ಬಾರಿ ಗೋವಾ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ನಮಗೆ ಮತ ಹಾಕಿ ಗೆಲ್ಲಿಸಿದರೂ ದುರಾದೃಷ್ಠವಶಾತ್ ನಮ್ಮ ಬಳಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ನಾವು ರಾಜ್ಯದ ಜನರ ಪ್ರೀತಿ ವಿಶ್ವಾಸ ಗಳಿಸಬೇಕು ಎಂದು ಕಾಂಗ್ರೇಸ್ ಕಾರ್ಯಕರ್ತರಿಗೆ ಗುಂಡೂರಾವ್ ಕಿವಿಮಾತು ಹೇಳಿದರು.

2022 ರಲ್ಲಿ ಗೋವಾದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೋವಾದಲ್ಲಿ ಪರಿಸರ ನಾಶಮಾಡಬಲ್ಲ ಎಲ್ಲ ಯೋಜನೆಗಳನ್ನೂ ರದ್ಧುಮಾಡಲಾಗುವುದು ಎಂದು ಗುಂಡೂರಾವ್ ಪುನರುಚ್ಚರಿಸಿದರು. 2019 ರಲ್ಲಿ ಕಾಂಗ್ರೇಸ್ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಸೇರಿದ ಶಾಸಕರು ಕಾಂಗ್ರೇಸ್ ಪಕ್ಷಕ್ಕೆ ಹಿಂದಿರುಗಲು ಬಯಸುತ್ತಾರೆ. ಆದರೆ ನಾವು ಅವರನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ, ಏಕೆಂದರೆ ನಮ್ಮ ಪಕ್ಷದಲ್ಲಿ ಕೆಲ ತತ್ವ ಸಿದ್ಧಾಂತಗಳಿವೆ ಎಂದು ದಿನೇಶ್ ಗುಂಡೂರಾವ್ ನುಡಿದರು.
ಗೋವಾ ಬಿಜೆಪಿ ಸರ್ಕಾರದಲ್ಲಿ ಸಮನ್ವಯತೆಯಿಲ್ಲ ಮುಖ್ಯಮಂತ್ರಿ ತ್ತು ಆರೋಗ್ಯ ಸಚಿವರು ಇವರಿಬ್ಬರ ನಡುವೆ ಪರಸ್ಪರ ವಿಶ್ವಾಸವಿಲ್ಲ ಎಂದು ದಿನೇಶ್ ಗುಂಡೂರಾವ್ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಠೀಕಾ ಪ್ರಹಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next